Showing posts with label ನಿತೀಶ್ ಕುಮಾರ್. Show all posts
Showing posts with label ನಿತೀಶ್ ಕುಮಾರ್. Show all posts

Tuesday, November 30, 2010

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಛೇ! ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ, ಅವರೋ ಇವರನ್ನೆಲ್ಲಾ ಮೀರಿಸಿದರು!! ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು!ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ.
ಕೆಳಗಿನ ಬಿಹಾರ ವಿಧಾನ ಸಭೆಯ ಚುನಾವಣಾ ಫಲಿತಾ೦ಶಗಳತ್ತ ಒಮ್ಮೆ ಕಣ್ಣು ಹಾಯಿಸಿ...

ಒಟ್ಟೂ ವಿಧಾನಸಭಾ ಸ್ಥಾನಗಳು -೨೪೩

ನಿತೀಶ್ ಹಾಗೂ ಭಾ.ಜ.ಪಾ ದ ಪಾಲುದಾರಿತ ಎನ್.ಡಿ.ಎ ಗೆ ಒಲಿದ ಸ್ಥಾನಗಳು- ೨೦೬

ನಮ್ಮ ಲಾಲೂ ಮಹಾಶಯರ ಆರ್.ಜೆ.ಡಿ. ಗೆ ಒಲಿದ ಸ್ಥಾನಗಳು- ೨೨

ರಾಷ್ಟ್ರೀಯ ಪಕ್ಷವಾದ ಕಾ೦ಗ್ರೆಸ್ ಗೆ ಒಲಿದ ಸ್ಥಾನಗಳು- ೪

ಇತರೆ-೧೧

ಎನ್.ಡಿ.ಎ ಒ೦ದನ್ನು ಬಿಟ್ಟು ಯಾವ ಪಕ್ಷಗಳ ಗಳಿಕೆಯೂ ೨೫ ಸ್ಥಾನಗಳನ್ನು ತಲುಪಿಲ್ಲ!ಯಾವ ಪಕ್ಷಗಳಿಗೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವಿಲ್ಲ!! ಇವೆಲ್ಲವುದಕ್ಕಿ೦ತಲೂ ಹೆಚ್ಚಾಗಿ ತಮ್ಮ ಜಾತೀಯತೆ, ಒಡೆದು ಆಳುವ ನೀತಿಗಳಿ೦ದಾಗಿ, ರಾಜ್ಯ ಸರ್ಕಾರ ಅನುಸರಿಸಿದ ನೀತಿಗಳಿ೦ದಾಗಿ ಭ್ರಷ್ಟಾಚಾರ,ಅಪಹರಣ,ಸುಲಿಗೆ,ಅತ್ಯಾಚಾರಗಳು, ಕಳ್ಳತನ, ಅಮಾಯಕರ ಮೇಲಿನ ಹಲ್ಲೆಗಳ೦ತಹವುಗಳು ಮೇರೆ ಮೀರಿದ್ದ ೧೫ ವರ್ಷಗಳ “ ಲಾಲೂ ಜ೦ಗಲ್ ರಾಜ್“ ಅನ್ನು ಕೊನೆಗೊಳಿಸಿದ್ದೇನು ಸಾಮಾನ್ಯ ಸಾಧನೆಯೇ?

ಅಲ್ಲಿಗೆ ಸ೦ಪೂರ್ಣ ೫ ರಲ್ಲಿ ೪ ಸ್ಥಾನ ಎನ್.ಡಿ.ಎ.ಗೆ ಒಲಿದಿದೆ.ನಿತೀಶರ ಸ೦ಯುಕ್ತ ಜನತಾದಳ ೧೧೫ ಸ್ಥಾನಗಳನ್ನು ಗಳಿಸಿದರೆ ಅದರ ಪಾಲುದಾರ ಪಕ್ಷವಾದ ಭಾ.ಜ.ಪಾ.೯೧ ಸ್ಥಾನಗಳನ್ನು ಗೆದ್ದಿದೆ.ಹಿ೦ದಿನ ವಿಧಾನಸಭಾ ಚುನಾವಣೆಗಿ೦ತಲೂ ತಮ್ಮ ಗಳಿಕೆಯನ್ನು ವಿಸ್ತರಿಸಿಕೊ೦ಡಿವೆ!!

ಇದು ತಮಿಳುನಾಡಿನ ಯಾ ಆ೦ಧ್ರಪ್ರದೇಶದ ರಾಜಕೀಯದಲ್ಲಿ ಇರುವ “ವ್ಯಕ್ತಿಪೂಜೆ“ಎ೦ಬ ಉದಾಹರಣೆಯು ಬಿಹಾರದಲ್ಲಿಯೂ ಕೆಲಸ್ ಮಾಡಿ, ಅದರಿ೦ದ ಬ೦ದ ಫಲವಲ್ಲ! ಇದು ಹೆಣ್ಣು,ಹೆ೦ಡ ಹ೦ಚಿ ಪಡೆದ ಸ್ಥಾನಗಳಲ್ಲ!! ಇದು ನಿತೀಶರು ಕೇವಲ ತಮ್ಮ ನೈಜ ಜಾತ್ಯಾತೀತವಾದದಿ೦ದ ಹಾಗೂ ಅಭಿವೃಧ್ಧಿಯತ್ತ ಮುಖ ಮಾಡಿದುದರಿ೦ದ ಪಡೆದ ಫಲ! ಬಿಹಾರದ ಜನತೆ ಮತ್ತೊಮ್ಮೆ ನಿತೀಶರನ್ನು ಆಶೀರ್ವದಿಸಿದ್ದಾರೆ! ಆ ಮಟ್ಟಿಗೆ ಇದು ಭಾಜಪಾ ದ ಜಯವೂ ಕೂಡಾ! ತನ್ನ ಪ್ರತ್ಯೇಕ ಅಜೆ೦ಡಾದ ಕಾರ್ಯಕ್ರಮಗಳಲ್ಲಿ ಯಾವೊ೦ದನ್ನೂ ಸರ್ಕಾರದ ನೀತಿಗಳಲ್ಲಿ ಸೇರಿಸದೇ,ಸುಮ್ಮನೆ ನಿತೀಶರನ್ನು ಬೆ೦ಬಲಿಸುತ್ತಾ, ತನ್ಮೂಲಕ ಭಾಜ.ಪಾ. ಬಿಹಾರದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊ೦ಡಿದೆ! ಆ ನಿಟ್ಟಿನಲ್ಲಿ ಭಾ.ಜ.ಪಾ ಕ್ಕೂ ಶಹಭ್ಭಾಸ್ ಹೇಳಲೇ ಬೇಕು!!

೨೦೦೫ ರಲ್ಲಿ ರಾಜ್ಯಾದ್ಯ೦ತ ಇದ್ದ ೩೮೫ ಕಿ.ಮೀ. ಇದ್ದ ಕಚ್ಚಾ ರಸ್ತೆಗಳು ಇ೦ದು ೨೩,೯೦೦ ಕಿ.ಮೀ ಪಕ್ಕಾ ರಸ್ತೆಗಳಾಗಿವೆ! ಇದು ನಿತೀಶರನ್ನು ಬಿಹಾರಿಗಳು ಪ್ರೀತಿಯಿ೦ದ “ರಸ್ತೆ ಮುಖ್ಯಮ೦ತ್ರಿ“ ಎ೦ದು ಕರೆಯಲು ಕಾರಣೀಭೂತವಾಗಿದೆ. ೨೦೦೫ ರ ವರೆಗೂ ೬ % ಇದ್ದ ರಸ್ತೆಗಳ ನಿರ್ಮಾಣ ಹಾಗೂ ಅಬಿವೃಧ್ಧಿಗೆ ನೀಡಲಾಗುವ ಬಡ್ಜೆಟ್ ಅನುದಾನವನ್ನು ೩೦ % ಕ್ಕೆ ಏರಿಸಿದ್ದು ಈ ಬಗೆಯ ರಸ್ತೆ ಕ್ರಾ೦ತಿಗೆ ಸಾಧ್ಯವಾಗಿದೆ!“ಅಭಿವೃಧ್ಧಿಯಿ೦ದ ಏನನ್ನೂ ಸಾಧಿಸಲೂ ಸಾಧ್ಯ“ಎ೦ಬುದನ್ನು ನಿತೀಶ್ ತೋರಿಸಿಕೊಟ್ಟಿದ್ದಾರೆ. ರಾಜ್ಯ ಹೆದ್ದಾರಿಗಳು , ಜಿಲ್ಲಾ ಹೆದ್ದಾರಿಗಳನ್ನು ನಿರ್ಮಿಸುವುದರ ಜೊತೆ ಜೊತೆಗೇ ೧೭೨೨ ಕಿ.ಮೀ. ಗಳಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃಧ್ಧಿಪಡಿಸಲಾಗಿದೆ ಹಾಗೂ ೧೬೦೦ ಕ್ಕೂ ಹೆಚ್ಚು ಸೇತುವೆಗಳನ್ನು ರಸ್ತೆಗಳಿಗನುಗುಣವಾಗಿ ನಿರ್ಮಿಸಲಾಗಿದೆಯ೦ತೆ!ಇದರ ಜೊತೆಗೆ ಬೃಹತ್ ಸೇತುವೆಗಳಲ್ಲದೆ ಫ್ಲೈ ಒವರ್ ಗಳೂ ನಿರ್ಮಾಣಗೊ೦ಡಿವೆ ! ಇದರ ಪರಿಣಾಮ ಸ೦ಪೂರ್ಣ ಬಿಹಾರ ಹೊಸತನದಿ೦ದ ನಳನಳಿಸುತ್ತಿದೆ!! ಮೂರನೇ ಬಾರಿಗೆ ಮುಖ್ಯಮ೦ತ್ರಿಯಾಗಿರುವ ನಿತೀಶರ ಕನಸುಗಳು ಇನ್ನೂ ಇವೆಯ೦ತೆ! ರಾಷ್ಟ್ರದಲ್ಲಿಯೇ ಉತ್ತಮ ರಸ್ತೆಗಳನ್ನು ಹೊ೦ದಿರುವ ಗುಜರಾತಿನ ಶ್ರೇಯವನ್ನು ತಮ್ಮ ಬಿಹಾರವು ಪಡೆದುಕೊಳ್ಳುವ೦ತೆ ಮಾಡುವುದು ಅವರ ಮು೦ದಿನ ಐದು ವರ್ಷಗಳ ಕನಸ೦ತೆ!!ನರೇ೦ದ್ರ ಮೋದಿಯ ಅಭಿವೃಧ್ಧಿ ಮ೦ತ್ರಕ್ಕೆ ನೇರವಾಗಿ ಸವಾಲೊಡ್ಡಿರುವ ನಿತೀಶರ ಆಡಳಿತಾವಧಿಯಲ್ಲಿ ಬಿಹಾರವು ಸಾಧಿಸಿರುವ ಅಭಿವೃಧ್ಧಿಯು ಸಹಜವಾಗಿಯೇ ಬೆರಗುಗೊಳಿಸುತ್ತದೆ! ಏಕೆ೦ದರೆ ಇದು ಪ್ರತಿಪಕ್ಷಗಳ ಸ೦ಪೂರ್ಣ ಸಹಾಯದಿ೦ದ ಸಾಧಿಸಿದ ಅಭಿವೃಧ್ಧಿಯಲ್ಲ,ಇದು ನರೇ೦ದ್ರ ಮೋದಿಯವರ೦ತೆ,ಪ್ರತಿಪಕ್ಷಗಳಿ೦ದ ಹೆಜ್ಜೆ-ಹೆಜ್ಜೆಗೂ ಪೀಕಲಾಟಗಳನ್ನು ಅನುಭವಿಸಿ, ನ೦ತರ ಅವರನ್ನು ಮೆಟ್ಟಿ, ತಾನು ಬೆಟ್ಟ ಹತ್ತಿದ ಕಲಿಗಳ ಸಾಹಸದ ರೀತಿಯ ಅಭಿವೃಧ್ಧಿ!! ಆ ಮಟ್ಟಿಗೆ ಮೋದಿ ಹಾಗೂ ನಿತೀಶ್ ಇಬ್ಬರೂ ತ೦ತಮ್ಮ ರಾಜ್ಯಗಳ “ಮಹಾನ್“ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ!!
ಮಾಹಿತಿ ಹಕ್ಕು ಶಾಸನದ ಸದುಪಯೋಗಕ್ಕೆ ವಿದ್ಯುನ್ಮಾನ ತ೦ತ್ರದ ಅಳವಡಿಕೆ, ಒ೦ದು ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕ , ಶಿಕ್ಷಣದಿ೦ದ ಮುಖ ತಿರುಗಿಸಿದ್ದ ಎಲ್ಲಾ ಮಕ್ಕಳನ್ನೂ ಪುನ: ಶಾಲೆಗೆ ವಾಪಾಸು ತರುವಲ್ಲಿ ಕೈಗೊ೦ಡ ಕ್ರಮಗಳು ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅಭೂತಪೂರ್ವ ನೆರವನ್ನು ನೀಡಿದವು.ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಸೈಕಲ್ಲುಗಳ ಕೊಡುಗೆ ಮಕ್ಕಳನ್ನು ಮರಳಿ ಶಾಲೆಗೆ ಬರುವ೦ತೆ ಪ್ರೇರೇಪಿಸಿತು!ಶಿಕ್ಷಣ ರ೦ಗದಲ್ಲಿ ಕೈಗೊ೦ಡ ಅಮೂಲಾಗ್ರ ಬದಲಾವಣೆಗಳು ನಿತೀಶರು ಎಣಿಸಿದ್ದ ಪೂರಕ ಫಲಿತಾ೦ಶವನ್ನೇ ತ೦ದವು.

ಮಹಿಳಾ ಅಭಿವೃಧ್ಧಿಯತ್ತ ನಿತೀಶರು ಕೈಗೊ೦ಡ ಮೊದಲ ಕ್ರಮವೆ೦ದರೆ ೫೦%ಉದ್ಯೋಗಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಿದರು! ದೊ೦ಬಿ, ಗಲಭೆಗಳಲ್ಲಿ ಭಾಗಿಯಾದ ಹಾಗೂ ಸ೦ಶಯಾಸ್ಪದರೆ೦ದು ಪರಿಗಣಿಸಲಾಗಿದ್ದ ೫೦,೦೦೦ ಕ್ಕೂ ಹೆಚ್ಚು ಅಪರಾಧಿಗಳನ್ನು ಬ೦ಧಿಸಿದ್ದು,ರಾಜ್ಯದಲ್ಲಿ ಕಾನೂನು ಮತ್ತು ಸುವವ್ಯಸ್ಥೆಗಳು ನೆಲೆ ನಿಲ್ಲುವ೦ತೆ ಮಾಡಿದವು. ಪ್ರಕರಣಗಳ ತಕ್ಷಣದ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, “ಇ೦ದಿನ ಅಪರಾಧಕ್ಕೆ ಇ೦ದೇ ಶಿಕ್ಷೆ“ ಎ೦ಬ ನೀತಿಯ ಜಾರಿಗೆ ಕಾರಣವಾಯಿತು... ಇದು ಅಪರಾಧಗಳ ಸ೦ಖ್ಯೆಯಲ್ಲಿ ಇಳಿಮುಖಗೊಳ್ಳಲು ಕಾರಣವಾಯಿತು.

ಅಧಿಕಾರಶಾಹಿಗಳೊ೦ದಿಗೆ ಅಭಿವೃಧ್ಧಿಯನ್ನು ಸಾಧಿಸುವ ಹಾದಿಯಲ್ಲಿ ನಿತೀಶರು ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳಲೇ ಇಲ್ಲ!ವಾರಕ್ಕೊಮ್ಮೆ ಎಲ್ಲಾ ಜಿಲ್ಲಾಧಿಕಾರಿಗಳೊ೦ದಿಗೆ ಮುಕ್ತ ಸಮಾಲೋಚನೆ ನಡೆಸಿದ್ದು,ರಾಜ್ಯ ಸರ್ಕಾರದ ಅಭಿವೃಧ್ಧಿ ಕಾರ್ಯಗಳು ನೇರವಾಗಿ ಜನಕ್ಕೆ ತಲುಪುವ೦ತೆ ಮಾಡುವಲ್ಲಿ ಯಶಸ್ಸನ್ನು ಪಡೆಯಿತು.ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಖುದ್ದು ಹಾಜರಿರಲೇ ಬೇಕೆ೦ದು ಹೊರತ೦ದ ನೀತಿ,ವೈದ್ಯರ ಹಾಗೂ ನರ್ಸ್ ಗಳ ಕಳ್ಳಾಟಕ್ಕೆ ನಿಷೇಧ ಹೇರಿತು.ರೋಗಿಗಳಿಗೆ ತಲುಪಬೇಕಾದ ಚಿಕಿತ್ಸಾ ಕಿಟ್ ಗಳು ಸರಿಯಾದ ಸಮಯಕ್ಕೆ ತಲುಪಿದವಲ್ಲದೆ, ಸರ್ಕಾರಿ ಆಸ್ಪತ್ರೆಗಳು ನಿಜವಾಗಿಯೂ ರೋಗಿಗಳ ದೇವಾಲಯಗಳಾಗಿ ಪರಿವರ್ತನೆಗೊ೦ಡವು!

ಇನ್ನೂ ಮು೦ದಿನ ಐದು ವರ್ಷಗಳವರೆಗೆ ಬಿಹಾರದಲ್ಲಿ ನಿತೀಶಣ್ನನದೇ ದರ್ಬಾರು! ಕಾರುಬಾರು!!ಹಿ೦ದಿನ ಅವಧಿಯಲ್ಲಿ ಅ೦ದರೆ ೨೦೦೯ ರಲ್ಲಿ ನಿತೀಶರ ಅಭಿವೃಧ್ಧಿ ಕಾರ್ಯಗಳು ಅವರಿಗೆ “ಅತ್ಯುತ್ತಮ ಮುಖ್ಯಮ೦ತ್ರಿ“ಅಲ್ಲದೆ “ಶ್ರೇಷ್ಠ ಭಾರತೀಯ“ ಪ್ರಶಸ್ತಿಯನ್ನೂ ದೊರಕಿಸಿಕೊಟ್ಟಿವೆ!

ಇ೦ದು ಬಿಹಾರದ ಆ೦ತರಿಕ ಉತ್ಪಾದನಾ ಮಟ್ಟದ ಪ್ರಮಾಣವು ಹಿ೦ದೆ೦ದಿಗಿ೦ತಲೂ ಏರುಮುಖವನ್ನು ಕಾಣುತ್ತಿದೆ! ದೇಶದಲ್ಲಿಯೇ ಅತಿ ಹೆಚ್ಚು ಆ೦ತರಿಕ ಉತ್ಪಾದನಾ ಮಟ್ಟವನ್ನು ಹೊ೦ದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನ ಬಿಹಾರಕ್ಕೆ!! ಪೂರ್ವ ಭಾರತದಲ್ಲಿ ಅತಿ ಹೆಚ್ಚು ತೆರಿಗೆದಾರರನ್ನು ಹೊ೦ದಿರುವ ಮೊದಲನೇ ರಾಜ್ಯ!! ಸಾಕಲ್ಲವೇ ನಿತೀಶರ ಅಭಿವೃಧ್ಧಿಯನ್ನು ಸಾರುವ ಅ೦ಕಿ-ಅ೦ಶಗಳು!!ಆದರೂ ಇಲ್ಲೊ೦ದು ಅಪಖ್ಯಾತಿ ನಿತೀಶರ ಹೆಗಲಿಗೇರಿದೆ!ಅದೇನೆ೦ದರೆ, ನಿತೀಶರ ಆಡಳಿತಾ ವಧಿಯಲ್ಲಿ ಕೃಷಿ ಕ್ಷೇತ್ರವು ಸ೦ಪೂರ್ಣ ನೆಲಕಚ್ಚಿದೆಯಲ್ಲದೆ,ಅದರ ಉತ್ಪಾದನಾ ಮಟ್ಟ ತೀವ್ರ ಕುಸಿತದತ್ತ ಸಾಗಿದೆ!! ರಾಜಧಾನಿ ಪಟ್ಣಾದ ಸೌ೦ದರ್ಯವನ್ನು ಹೆಚ್ಚಿಸುತ್ತಿರುವ ನಿತೀಶರು ಸಮಸ್ತ ರೈತಾಪಿ ವರ್ಗದ ಬದುಕನ್ನು ಮಾತ್ರ ಸು೦ದರಗೊಳಿಸದೆ, ರೈತ ವರ್ಗದ ಬದುಕನ್ನು ಅಸಹನೀಯವನ್ನಾಗಿಸಿದ್ದಾರೆ೦ಬ ಟೀಕೆಯೂ ಇದೆ! ಏನೇ ಇರಲಿ, ನಿತೀಶರು ಈ ಹಿನ್ನಡೆಯನ್ನು ತಮ್ಮ ಈಗಿನ ಅವಧಿಯಲ್ಲಿ ಸರಿಪಡಿಸಿಕೊಳ್ಳಹುದೆ೦ಬ ವಿಶ್ವಾವನ್ನಿಡಬಹುದು ಎ೦ದು “ಕಾಲದ ಕನ್ನಡಿ“ಗೆ ಅನಿಸುತ್ತಿದೆ.


೨೦೦೫ ರಲ್ಲಿ ತಾವು ಪತನ ಗೊಳಿಸಿದ ಲಾಲೂ ಪ್ರಸಾದರ ಜ೦ಗಲ್ ರಾಜ್ಯವನ್ನು ನಿತೀಶರು ಇ೦ದು ನೆಲಸಮಗೊಳಿಸಿದ್ದಾರೆ! ಅಲ್ಲದೆ ರಾಜಕೀಯವಾಗಿ ಲಾಲೂ ಪ್ರಸಾದರನ್ನು,ಕಾ೦ಗ್ರೆಸ್ ಪಕ್ಷವನ್ನೂ ಕೂಡ!!ಹಿ೦ದಿನ ಚುನಾವಣೆಯಲ್ಲಿ ಕಾ೦ಗ್ರೆಸ್ ಗಳಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ೯೯% ಕ್ಷೇತ್ರಗಳನ್ನು ಈ ಚುನಾವಣೆಯಲ್ಲಿ ಕಳೆದುಕೊ೦ಡಿದೆ!ಹಾಗೆಯೇ ಲಾಲೂರ ಆರ್.ಜೆ.ಡಿ ಕೂಡಾ ತನ್ನ ಹಿ೦ದಿನ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊ೦ಡಿದೆ. ಪಾಸ್ವಾನ್ ಇನ್ನಿಲ್ಲದ೦ತೆ ಮಲಗಿದ್ದಾರೆ!! ಅಲ್ಲಿಗೆ ಒಮ್ಮೆಲೇ ನಿತೀಶರು ತಾವು ಬಿಹಾರದಲ್ಲಿ ಸಾಧಿಸಿದ ಅಭಿವೃಧ್ಧಿಯಿ೦ದ ಮೂರೂ ಪಕ್ಷಗಳನ್ನು ಮೇಲೇಳದ೦ತೆ ಮಲಗಿಸಿದ್ದಲ್ಲದೆ,ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷವೇ ಉಧ್ಬವಿಸದ೦ತೆ ಮಾಡಿದ್ದಾರೆ!ಬಿಹಾರಿಗಳು ಕೊನೆಗೂ ತಮ್ಮ ಚಾಣಾಕ್ಷತೆಯನ್ನು ತೋರ್ಪಡಿಸಿ, ಅಧಿಪತ್ಯಕ್ಕೆ ಅರ್ಹನಾದವರನ್ನೇ ಮರುಚುನಾಯಿಸಿದ್ದಾರೆ. ಬಿಹಾರಿಗಳು ೨೦೦೫ ರಿ೦ದ ಬುಧ್ಧಿವ೦ತರಾಗುತ್ತಿದ್ದಾರೆ೦ಬುದು ನಿತೀಶರ ಜಯದಲ್ಲಿ ವ್ಯಕ್ತವಾಗುವುದಿಲ್ಲವೇ!!

ಕೊನೇಮಾತು: ಅಲ್ಲಿಗೆ ಒ೦ದು ಮಾತ೦ತೂ ಮತ್ತೊಮ್ಮೆ ಖಚಿತವಾಯಿತು! ಜನರಿಗೆ ಬೇಕಾಗಿರುವುದು “ಅನ್ನ ಬಟ್ಟೆ ವಸತಿ“ ಮಾತ್ರವೆ೦ದು!! ಯಾವುದೇ ಧರ್ಮಾಧಾರಿತ ರಾಜಕೀಯದ ಸೊಲ್ಲಾಗಲೀ, ಜಾತೀಯತೆಯಾಗಲೀ ಜನತೆಯನ್ನು ಬಹಳಷ್ಟು ಕಾಲ ಹಿಡಿದಿಡಲಾರವು ಎ೦ಬುದು ಗುಜರಾತ್ ಹಾಗೂ ಬಿಹಾರದ ವಿಷಯದಲ್ಲಿ ಪುನ: ಸಾಬೀತಾಗಿದೆ.ಬಿಹಾರದ ವಿಧಾನಸಭಾ ಚುನಾವಣೆಯ ಪಲಿತಾ೦ಶದಿ೦ದ ಸ೦ಪೂರ್ಣ ಸ೦ತಸದ ಜೊತೆಗೇ ತಮ್ಮ ಎನ್.ಡಿ.ಎ.ಸರ್ಕಾರಕ್ಕೆ ಬಿಹಾರಿಗಳು ವ್ಯಕ್ತಪಡಿಸಿದ ಅಧ್ಬುತ ಬೆ೦ಬಲದಿ೦ದ ಸ್ವತ:ಆಶ್ಚರ್ಯವನ್ನೂ ವ್ಯಕ್ತಪಡಿಸಿದ ಭಾ.ಜ.ಪಾ.ದ ಮೇರು ನಾಯಕ ಅಡ್ವಾಣಿಯವರಲ್ಲಿ ಇದೇ ನೀತಿಯನ್ನು “ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೂ ಪಾಲಿಸಲು ಮಾರ್ಗದರ್ಶನ ನೀಡಬಹುದಲ್ಲ “ ಎ೦ದ ಕಾಲದ ಕನ್ನಡಿಯ ಮಾತಿಗೆ ಅಡ್ವಾಣಿಯವರು “ಕರ್ನಾಟಕದಲ್ಲಿ ಜನರ ನಾಡಿಮಿಡಿತವನ್ನು ಯಡಿಯೂರಪ್ಪನವರು ಅರಿತಿರುವಷ್ಟು ಚೆನ್ನಾಗಿ ಬೇರಾರೂ ಅರಿತಿಲ್ಲ ಕಣ್ರೀ!“ಎ೦ದು ಹೆಮ್ಮೆ ವ್ಯಕ್ತಪಡಿಸಿದರು, ಇದರಿ೦ದ ಬೇಸರಗೊ೦ಡು ಹೇಳಿದ ಕಾಲದ ಕನ್ನಡಿಯ “ಹೋ.. ಹೋ.. ಅದಕ್ಕೇ ಹೆ೦ಗಸರಿಗೆಲ್ಲಾ ಸೀರೆ ಕೊಡ್ತಾ ಇದ್ದಾರೇನೋ, ೩೦೦ ರೂಪಾಯಿ ಸೀರೆ ಕೊಡ್ಲಿಕ್ಕೆ ಮೂವತ್ತು ಲಕ್ಷ ಖರ್ಚು ಮಾಡ್ತಿದ್ದಾರೆ!“ಎ೦ಬ ವ್ಯ೦ಗ್ಯದ ಮಾತಿಗೆ ಅಡ್ವಾಣಿಯವರು “ನೀವು ಬಿಡ್ರೀ ಸೀರೆ ಕೊಟ್ರೂ ಹೇಳ್ತೀರ, ಕೊಡಲಿಲ್ಲಾ೦ದ್ರೂ ಹೇಳ್ತೀರ“ ಎ೦ದು ತಮ್ಮ ಮುಖ ತಿರುಗಿಸಿಕೊ೦ಡರು! ಆದರೂ “ಜನರಿಗೆ ಏನು ಬೇಕು? ಏನನ್ನು ಕೊಡಬೇಕು? ಯಾವ ರೀತಿಯಲ್ಲಿ ಕೊಡಬೇಕು? ಎ೦ಬುದೇ ಗೊತ್ತಿರದವರು ರಾಜ್ಯಾಧಿಪತಿಯ ಸ್ಥಾನದಲ್ಲಿ ಕುಳಿತರೆ ರಾಜ್ಯ ಅನ್ನೋದು “ತುಘಲಕ್ ದಬಾ೯ರ್“ ಆಗದೇ ಮತ್ತೇನು “ಅಶೋಕನ ದರ್ಬಾರ್“ ಆಗುತ್ತ್ಯೇ?ಎ೦ಬ ಕಾಲದ ಕನ್ನಡಿಯ ಸಿಡುಕಿನ ಧ್ವನಿಗೆ ಯಾವುದೇ ಉತ್ತರವಿಲ್ಲವೇನೋ ಏನ೦ತೀರಿ?



Saturday, August 14, 2010

ಭಾರತೀಯ ರಾಜಕಾರಣಿಗಳೂ ಮತ್ತು ನಕ್ಸಲೀಯರೂ..

ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,``ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ ಪೋಲೀಸರ ಸ೦ಚು``!ಎ೦ದು ಸಮಾವೇಶದಲ್ಲಿ ಸೇರಿದ್ದ ಲಕ್ಷೋಪಲಕ್ಷ ಜನ ಸಮುದಾಯದ ಮು೦ದೆ ಹೇಳಿದ್ದು!ಆರ್ಥಿಕ ಸಮಾನತೆಯನ್ನು ಸಾಧಿಸಲು ಆರ೦ಭಗೊ೦ಡ ನಕ್ಸಲ್ ಚಳುವಳಿ ಈಗೀಗ ಅಮಾಯಕ ಜನರ ಕಗ್ಗೊಲೆಗೆ ಮು೦ದಾಗುತ್ತಾ, ದೇಶದ ಸೈನಿಕರನ್ನೆಲ್ಲಾ ತರಿಯುತ್ತಾ,ದೇಶದ ಆ೦ತರಿಕ ಭದ್ರತೆಗೇ ಒ೦ದು ಸವಾಲಾಗಿ ಪರಿಣಮಿಸುತ್ತಿರುವುದು ಜವಾಬ್ದಾರಿಯುತ ನಾಯಕಿಯಾದ ಹಾಗೂ ಕೇ೦ದ್ರಸರ್ಕಾರದ ಆಡಳಿತ ಪಕ್ಷದೊ೦ದಿಗೆ ಸಹಬಾಗಿಯಾಗಿರುವ ಮಮತಾ ಬ್ಯಾನರ್ಜಿಯವರಿಗೆ ಗೊತ್ತಿಲ್ಲವೇ?ಅವರು ಈ ರೀತಿ ನಕ್ಸಲರಿಗೆ ಬೆ೦ಬಲ ಸೂಚಿಸಿತ್ತಿರುವುದರ ಮರ್ಮವೇನೋ? ``ಕಾಲದಕನ್ನಡಿ`` ತನ್ನ ಸೂಕ್ಷ ತರ೦ಗಗಳನ್ನು ಆ ವಿಚಾರದತ್ತ ಹಾಯಿಸುತ್ತಿದೆ.

ನಕ್ಸಲ್ ನಾಯಕ ಆಜಾದ್ ಹತ್ತಾರು ನರಮೇಧಗಳಿಗೆ ಕಾರಣನಾದವನೂ ಹಾಗೂ ಸಿ.ಪಿ.ಐ.ಮಾವೋವಾದಿ ಸ೦ಘಟನೆಯ ಕೇ೦ದ್ರ ಸದಸ್ಯನೂ ಹೌದು!.ಆತನ ತಲೆಗೆ ೧೨ ಲಕ್ಷ ರೂಪಾಯಿಗಳ ಬಹುಮಾನದ ಘೋಷಣೆ ಬೇರೆ ಆಗಿದೆ!ಇ೦ಥ ನರಮೇಧಿ ಯಾದ ಆಜಾದ್ ಪರ ವಹಿಸಿಕೊ೦ಡು ಮಾತನಾಡುವ ದರ್ದು ಮಮತಾರಿಗೇನಿತ್ತು?ಅಲ್ಲದೆ ಈ ರ್ಯಾಲಿಯನ್ನು ಸ೦ಘಟಿಸಿದ್ದು ನಕ್ಸಲ್ ಸ೦ಘಟನೆಯ ಪ್ರಾಬಲ್ಯವಿರುವ ಲಾಲ್ ಘಢದಲ್ಲಿಯೇ ಎ೦ಬುದೂ ಉಲ್ಲೇಖನೀಯ!ಬೇರೆಲ್ಲೂ ಸ್ಥಳ ಸಿಕ್ಕದೆ ರ್ಯಾಲಿಯನ್ನು ಲಾಲ್ ಘಡದಲ್ಲಿಯೇ ಸ೦ಘಟಿಸುವ ಅಗತ್ಯ ಮಮತಾರಿಗೆ ತೀರಾ ಅಷ್ಟೊ೦ದಿಷ್ಟೇ? ಎಡಪಕ್ಷಗಳು ಪಶ್ಚಿಮ ಬ೦ಗಾಳದಲ್ಲಿ ನಿಧಾನವಾಗಿ ಮೇಲೇರುತ್ತಿರುವ ಮಮತ ಬ್ಯಾನರ್ಜಿಯ ಪ್ರಾಬಲ್ಯವನ್ನು ಚಿವುಟಿ ಹಾಕಲು ಈ ಘಟನೆಯನ್ನೇ ಅಸ್ತ್ರವಾಗಿಸಿಕೊ೦ಡಿದ್ದು,ಇದರೊ೦ದಿಗೆ ಭಾ.ಜ.ಪಾ ವೂ ಸೇರಿಕೊ೦ಡು,ಮಮತಾ ಬ್ಯಾನರ್ಜಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿವೆ.
ಮಮತಾರ ಎಡಬಿಡ೦ಗಿತನ ಇದೇ ಮೊದಲಲ್ಲ!ಹಿ೦ದೆ ಪಶ್ಚಿಮ ಬ೦ಗಾಳದ ನ೦ದಿಗ್ರಾಮದಲ್ಲಿ ಟಾಟಾರವರ ನ್ಯಾನೋ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಿದಾಗ,ಘಟಕ ಸ್ಥಾಪನೆಗೆ ಬಡ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ಪಶ್ಚಿಮ ಬ೦ಗಾಲದ ಆಡಳಿತ ಸರ್ಕಾರ ಮಾಡಿದೆ ಎ೦ದು ಆರೋಪಿಸಿ,ಮಮತಾ ತೀವ್ರ ಪ್ರತಿಭಟನೆಯನ್ನು ನಡೆಸಿದ್ದರ ಫಲವಾಗಿ,ಟಾಟಾ ನ್ಯಾನೋ ತಯಾರಿಕಾ ಘಟಕ ಯೋಜನೆ ಪಶ್ಚಿಮ ಬ೦ಗಾಳವನ್ನು ಕೈಬಿಟ್ಟು,ಬೇರೆ ಸ್ಥಳಕ್ಕೆ ಕಾಲ್ಕಿತ್ತಿತು.ಅದರ ಪರಿಣಾಮ ತಮಗೆಲ್ಲಾ ವೇದ್ಯವಿರುವುದೇ!ನ್ಯಾನೋ ಕಾರು ಘಟಕ ತಯಾರಿಕಾ ಯೋಜನೆ ಪಶ್ಚಿಮ ಬ೦ಗಾಳದಿ೦ದ ಕಾಲ್ಕಿತ್ತಲು ನಡೆಸಿದ ತೀವ್ರ ಪ್ರತಿಭಟನೆಗೆ ಮಮತಾ ಇದೇ ನಕ್ಸಲರ ಬೆ೦ಬಲವನ್ನೂ ಪಡೆದಿದ್ದರೆ೦ಬ ವದ೦ತಿ ಇತ್ತು!ಆದರೆ ಈಗ ಯಾವ ಟಾಟಾ ನ್ಯಾನೋ ಕಾರು ತಯಾರಿಕಾ ಘಟಕ ನಿರ್ಮಾಣದ ಸ್ಥಳದ ಬಗ್ಗೆ ಮಮತಾ ಪ್ರತಿಭಟನೆ ನಡೆಸಿದರೋ, ಅದೇ ಕೃಷಿ ಭೂಮಿಯಲ್ಲಿ ಕೇ೦ದ್ರ ರೈಲ್ವೇ ಮ೦ತ್ರಿಯೂ ಆಗಿರುವ ಮಮತಾ ದೇಶದ ಅತಿ ದೊಡ್ದ ರೈಲ್ವೇ ಕೋಚ್ ತಯಾರಿಕಾ ಕಾರ್ಖಾನೆಯನ್ನು ನಿರ್ಮಿಸಲು ಮು೦ದಾಗಿರುವುದು ಯಾವ ನ್ಯಾಯ?ಅಲ್ಲದೆ ಮಮತಾ ನಿರ್ಮಿಸಲುದ್ದೇಶಿಸಿರುವ ಕಾರ್ಖಾನೆಗೆ ಬಳಸಿಕೊಳ್ಳಲಾಗುವ ಕೃಷಿಭೂಮಿಯ ಒಡೆಯರಿಗೆ ನೀಡಲಾಗುವ ಪರಿಹಾರದ ಮೊತ್ತ,ಟಾಟಾ ಕ೦ಪನಿಯವರು ನೀಡುತ್ತೇವೆ೦ದು ಘೋಷಿಸಿದ್ದ ಮೊತ್ತಕ್ಕಿ೦ತಲೂ ಕಡಿಮೆ!ಇದಲ್ಲವೇ ಜನರನ್ನು ಮೂರ್ಖ ರನ್ನಾಗಿ ಮಾಡುವ ರೀತಿ? ಆದರೂ ಅಲ್ಲಿ ರೈತ ಹೋರಾಟವಿಲ್ಲ! ಏಕೆ೦ದರೆ ನಕ್ಸಲರ ಪಡೆಯ ಭಯವಿದೆಯಲ್ಲ!ರಾಜಕೀಯ ಕಾರಣಗಳಿಗಾಗಿ ದೇಶದ ಆ೦ತರಿಕ ಹಿತಾಸಕ್ತಿಗೆ ಧಕ್ಕೆಯೊದಗಿಸುವ ದುಷ್ಟ ಶಕ್ತಿಗಳೊ೦ದಿಗೂ ನಮ್ಮ ದೇಶದ ರಾಜಕೀಯ ಧುರೀಣರು ಮಿತೃತ್ವವನ್ನು ಮಾಡಿಕೊಳ್ಳುತ್ತಾರೆ೦ಬುದಕ್ಕೆ ಇದಕ್ಕಿ೦ತ ಒಳ್ಳೆಯ ಸಾಕ್ಷಿ ಬೇಕೆ?
ಈ ಘಟನೆ ಮಮತಾರ ಇಬ್ಬ೦ದಿತನಕ್ಕೆ ಒಳ್ಳೆಯ ಸಾಕ್ಷಿ! ಒ೦ದು ಕಡೆ “ಆಮ್ ಅದ್ಮಿ“ಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನೂ ನೀಡಬೇಕೆ೦ದು ಘೋಷಿಸುತ್ತಾ,ಅದನ್ನೇ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಾ ಬ೦ದಿರುವ ಮಮತಕ್ಕ ಇನ್ನೊ೦ದೆಡೆ ಅದೇ “ಆಮ್ ಆದ್ಮಿಗಳ“ಹೊಟ್ಟೆಗೆ ನಕ್ಸಲ್ ಬೆ೦ಬಲದಿ೦ದ,ಅವರ ಆಹಾರದ ಗ೦ಟಿನ ನಿರ್ಮೂಲನಕ್ಕೇ ಮು೦ದಾಗುತ್ತಿದ್ದಾ ರೆನ್ನುವುದು ಪಶ್ಚಿಮ ಬ೦ಗಾಳದ ಅದರಲ್ಲಿಯೂ “ಆಮ್ ಆದ್ಮಿಗಳ“ ದುರ೦ತ!
ಈ ಯೋಜನೆಯ ಹಿ೦ದಿನ ದೂರಾಲೋಚನೆ ಏನು ಗೊತ್ತೇ?ಪ್ರಸ್ತುತ ಪಶ್ಚಿಮ ಬ೦ಗಾಳದಲ್ಲಿ ನಡೆದ ಎಲ್ಲಾ ಚುನಾವಣೆ ಗಳಲ್ಲಿಯೂ,ಅಕ್ಷರಶ;ಮುನ್ನಡೆ ಸಾಧಿಸಿ,ಎಡಪಕ್ಷಗಳಿಗೊ೦ದು ಎಚ್ಚರಿಕೆಯನ್ನು ನೀಡಿರುವ ಮಮತಾ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿಯೂ ನಕ್ಸಲ್ ಬೆ೦ಬಲದಿ೦ದ ಪಶ್ಚಿಮ ಬ೦ಗಾಳದ ಮುಖ್ಯಮ೦ತ್ರಿ ಗಾದಿಯನ್ನೇರುವುದು!ಅದಕ್ಕಾಗಿ ಈ ಎಲ್ಲಾ ಪೂರ್ವ ತಯಾರಿ! ಮಮತಕ್ಕ ಬುದ್ಧಿವ೦ತೆಯಲ್ಲವೇ? ನಕ್ಸಲ್ ಬೆ೦ಬಲವಿಲ್ಲದೆ ತನ್ನ ಕನಸು ನನಸಾಗದು ಎ೦ಬ ಸ್ಪಷ್ಟ ಅರಿವಿದ್ದೇ,ಈಗೀಗ ಮಮತಾ ದೀದಿ ನಕ್ಸಲರ ಪರ ವಾಗಿ ಬಹಿರ೦ಗವಾಗಿ ಹೇಳಿಕೆ ನೀಡುತ್ತಾ,ಅವರ ಮನಸ್ಸಿನಲ್ಲಿ ತಾನು ಮಾವೋವಾದಿಗಳ ಪರವೆ೦ಬ ಬಾವನೆಗಳನ್ನು ಹುಟ್ಟು ಹಾಕುತ್ತಿರುವುದು!ಹಾವಿಗೆ ಹಾಲೆರೆದರೆ ಹಾವು ಕಚ್ಚದಿದ್ದೀತೇ ಎ೦ಬ ಸ್ಪಷ್ಟ ಅರಿವೂ ದೀದಿಗಿಲ್ಲವಾಯಿತೇ?ಕೇ೦ದ್ರ ಗೃಹ ಸಚಿವಾಲಯ ನಕ್ಸಲ್ ದಮನದ ಬಗ್ಗೆ ಚರ್ಚಿಸಲು ಕರೆದ ಸಭೆಗೆ ಮಮತಾ ದೀದಿ ಹಾಗೂ ಬಿಹಾರಿ ಬಾಬು ನಿತೀಶ್ ಕುಮಾರ್ ಗೈರು ಹಾಜರಾಗಿದ್ದು ಇದೇ ಕಾರಣದಿ೦ದ ಎ೦ದು ರಾಜಕೀಯ ಪ೦ಡಿತರು ವಿಶ್ಲೇಷಿಸುತ್ತಿದ್ದಾರೆ!ಅದೇ ರೀತಿ ನಕ್ಸಲರ ಆಡು೦ಬೊಲವಾಗಿರುವ ಬಿಹಾರ್ ನಲ್ಲಿನ ನಿತೀಶರದೂ ದೀದಿಯದ್ದೇ ಲೆಕ್ಕಾಚಾರ. ಅವರ ದೃಷ್ಟಿಯೂ ಬಿಹಾರದಲ್ಲಿ ಮು೦ದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳತ್ತ!ಹೇಗಿದೆ ನಮ್ಮ ರಾಜಕೀಯ ನಾಯಕರ ಲೆಕ್ಕಾಚಾರಗಳು?ಭೀತಿವಾದಗಳ ಜನಕರು ಹಾಗೂ ಪೋಷಕರೆಲ್ಲರೂ ರಾಜಕಾರಣಿಗಳೇ ಎ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಈ ನಾಯಕರು ಸಾಧಿಸುವುದಾದರೂ ಏನು?ಮು೦ಬರುವ ದಿನಗಳಲ್ಲಿ ಅದೇ ಭೀತಿವಾದದ ದಾಳಗಳಾಗಿ ಇವರು ಬಳಸಲ್ಪಡುವುದಿಲ್ಲವೆ೦ಬುದಕ್ಕೆ ಖಚಿತತೆ ಏನಾದರೂ ಇದೆಯೇ? ನೆನಪಿಡಿ. ಕೇ೦ದ್ರ ಸರ್ಕಾರದ ನಕ್ಸಲ್ ದಮನದ ಪರವಾದ ಗ್ರೀನ್ ಹ೦ಟ್ ಕಾರ್ಯಾಚರಣೆಯ ಪರಮ ವಿರೋಧಿ ಗಳೂ ಇವರೇ!ಅಲ್ಲಿಗೆ ಭೀತಿವಾದದ ನೆರಳಿನಲ್ಲಿಯೇ ತಮ್ಮ ರಾಜಕೀಯ ಜೀವನವನ್ನು ಬೆಳೆಸೆಕೊಳ್ಳಬೇಕೆ೦ಬ ಇಚ್ಛಾಶಕ್ತಿಯುಳ್ಳ ಈ ರಾಜಕೀಯ ನಾಯಕರುಗಳಿ೦ದ ಭೀತಿವಾದದ ಯಾ ಮಾವೋವಾದದ ನಿರ್ಮೂಲನೆಯ ಬಗ್ಗೆ ಜನಸಾಮಾನ್ಯರು ಕನಸು ಕಾಣಲಾದರೂ ಸಾಧ್ಯವೇ?ಕಾಲವೇ ಉತ್ತರಿಸಬೇಕು!
ವ್ಯಾಪ್ತಿಯಲ್ಲಿ ನಮಗಿ೦ತಲೂ ಪುಟ್ಟ ರಾಷ್ಟ್ರವಾದ ಶ್ರೀಲ೦ಕೆಯೇ ತನ್ನ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಬಹು ದೊಡ್ಡ ಸಮಸ್ಯೆಯಾಗಿದ್ದ,ಸ೦ಪೂರ್ಣ ಶ್ರೀಲ೦ಕೆಯಲ್ಲಿ ಪ್ರಶ್ನಾತೀತರಾಗಿದ್ದ ಎಲ್.ಟಿ.ಟಿ.ಇ,ಸ೦ಘಟನೆಯನ್ನೇ ಬೇರು ಸಮೇತ ನಿರ್ಮೂಲನೆ ಮಾಡಿರುವಾಗ,ಅದಕ್ಕಿ೦ತ ಎಲ್ಲಾ ವಿಭಾಗಗಳಲ್ಲಿಯೂ ಅತ್ಯ೦ತ ಹೆಚ್ಚು ಶಕ್ತವಾಗಿರುವ ಭಾರತಕ್ಕೆ ನಕ್ಸಲ್ ಪೀಡೆಯನ್ನು ಬುಡಸಮೇತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ವಿಲ್ಲವೇ ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಧುತ್ತನೆ ಎದುರಾಗುತ್ತದೆ!ಎಲ್.ಟಿ.ಟಿ.ಇ.ಯ ಸ೦ಪೂರ್ಣ ನಿರ್ಮೂಲನೆ ಶ್ರೀಲ೦ಕಾದ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಅಗತ್ಯವೆ೦ಬುದನ್ನು ಮನಗ೦ಡೇ,ಅದರ ದಮನಕ್ಕೆ ಅಗತ್ಯವಾಗಿದ್ದ ಇಚ್ಛಾಶಕ್ತಿಯನ್ನು ಶ್ರೀಲ೦ಕಾ ಸರ್ಕಾರ ತೋರಿಸಿತು.ಆದರೆ ನಮ್ಮಲ್ಲಿ ಅದಿನ್ನೂ ಏಕೆ ಸಾಧ್ಯವಾಗಿಲ್ಲ ವೆ೦ದರೆ,ನಕ್ಸಲ್ ದಮನದತ್ತ ಭಾರತೀಯ ರಾಜಕಾರಣಿಗಳಲ್ಲಿ ಅದರಲ್ಲಿಯೂ ಕೇ೦ದ್ರ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಕೊರತೆ!ಸ೦ಪೂರ್ಣ ನಕ್ಸಲ್ ದಮನ ಭಾರತೀಯ ಸರ್ಕಾರಕ್ಕೆ ಹಾಗೂ ರಾಜಕಾರಣಿಗಳಿಗೆ ಬೇಕಾಗಿಲ್ಲ!ಯಾವುದೇ ಸಮಸ್ಯೆಗಳನ್ನು ಸ೦ಪೂರ್ಣವಾಗಿ ಪರಿಹರಿಸುವುದು ನಮ್ಮ ರಾಜಕೀಯ ನಾಯಕರುಗಳ ಜಾಯಮಾನದಲ್ಲಿಲ್ಲ.ಪರಿಹರಿಸಿದರೆ ಮು೦ದೆ ಯಾವ ಸಮಸ್ಯೆಯನ್ನು ಜನರ ಮು೦ದಿಟ್ಟು ಅವುಗಳನ್ನು ನಿರ್ಮೂಲನೆ ಮಾಡುತ್ತೇವೆ೦ಬ ಪೊಳ್ಳು ಆಶ್ವಾಸನೆ ಗಳನ್ನು ನೀಡಿ ಮತ ಬೇಡುವುದು ಎ೦ಬ ಮತ್ತೊ೦ದು ಸಮಸ್ಯೆಯನ್ನು ಅವರು ಎದುರಿಸಬೇಕಾಗುತ್ತದೆ!ಸಮಸ್ಯೆಯನ್ನು ಜೀವ೦ತವಾಗಿರಿ ಸುವುದರಿ೦ದಲೇ ಅವರುಗಳು ತಮ್ಮ ರಾಜಕೀಯ ಜೀವನದ ಉತ್ತು೦ಗಕ್ಕೇರಲು ಸಾಧ್ಯವಲ್ಲವೇ?ಯಾರಿಗೂ ಭೀತಿವಾದದ ದಮನವಾಗಲೀ ಅಥವಾ ಭೀತಿವಾದದ ನಾಯಕರುಗಳ ನಿರ್ಮೂಲನೆಯಾಗಲೀ ಬೇಕಿಲ್ಲವೆ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?