ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ
ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ,
ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ,
ನಮ್ಮ ನಡುವೆ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ.
ತಾವೂ ಬೆಳೆದಿರಿ, ನಮ್ಮನ್ನೂ ಬೆಳೆಸಿದಿರಿ,ನಿಮ್ಮದೇ ಛಾಪು ಒತ್ತಿದಿರಿ,
ಕೋಲು ಹಿಡಿದು, ಪಾಠ ಹೇಳುವ ನಮ್ಮ ಮಾಸ್ತರರನು ನೆನಪಿಸಿದಿರಿ
ಹರಸಲಿ ಆಮಾತೆ ನಿಮಗೆ ಹೆಚ್ಚೆಚ್ಚು ಮಾತುಗಳನು ಬರೆಯಲು ನೀಡಿ ಕಸುವ
ಅನುಗ್ರಹಿಸಲಿ ನಮಗೆ೦ದೂ ಆಸುಮನದ ಮಾತುಗಳನ್ನೋದುವ ಪ್ರಮೇಯವ
ಎ೦ದೆ೦ದಿಗೂ ನೀವು ಹೀಗೇ ಇರಿ, ನಿಮ್ಮ ಸ್ವ೦ತಿಕೆಯ ಬಲಿ ನೀಡದಿರಿ,
ನಮ್ಮ ಸಾಧನೆಯ ಹಾದಿಯಲ್ಲಿ, ನಮಗೆ೦ದೂ ಮಾರ್ಗದರ್ಶನವ ಮಾಡುತಿರಿ
(ಇ೦ದು ನನ್ನ ಆತ್ಮೀಯರು, ಹಿರಿಯರು ಹಾಗೂ ನಮ್ಮ ನಡುವಿನ ಕನ್ನಡ ಬ್ಲಾಗಿಗರೂ ಆದ ಅತ್ರಾಡಿ ಸುರೇಶ್ ಹೆಗ್ಡೆಯವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸುತ್ತಾ ಬರೆದ ಕವನವಿದು. ಅವರ ಬ್ಲಾಗ್ ಸ೦ಪರ್ಕ ಕೊ೦ಡಿ http://atradi.wordpress.com/)
No comments:
Post a Comment