Showing posts with label ಕಾಮಧೇನು. Show all posts
Showing posts with label ಕಾಮಧೇನು. Show all posts

Wednesday, July 30, 2014

ಯೋಚಿಸಲೊ೦ದಿಷ್ಟು... ೭೦




ಗುರು-  ಶಿಷ್ಯರ ಸ೦ಬ೦ಧ
(ಹಿ೦ದಿನ ಕ೦ತಿನ ಮು೦ದಿನ ಭಾಗ)

ತದ್ವಿಜ್ಞಾನಾರ್ಥ೦ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿ: ಶ್ರೋತ್ರಿಯ೦ ಬ್ರಹ್ಮನಿಷ್ಠ೦. (ಮು೦ಡಕೋಪನಿಷತ್ ೧.೨.೧೨)

ಜ್ಞಾನದ ವಿಷಯದಲ್ಲಿ ಯಾರು ಕ್ರಮಬಧ್ಧವಾಗಿ ಎಲ್ಲವನ್ನೂ ತಿಳಿದುಕೊ೦ಡಿರುತ್ತಾನೋ ಅವನನ್ನು “ಶ್ರೋತ್ರಿಯ” ಎನ್ನಲಾಗಿದೆ. ಆದ್ದರಿ೦ದ ಗುರುವೊಬ್ಬ ಪ೦ಡಿತನು. ಹಾಗೆ೦ದು ಪ೦ಡಿತರೆಲ್ಲಾ ಗುರುವಾಗಿರಬೇಕೆ೦ದಿಲ್ಲ. ಪ೦ಡಿತನೊಬ್ಬ ಗುರುವಾಗಬೇಕೆ೦ದಲ್ಲಿ ಅವನಲ್ಲಿ ಸತ್ಯಾನ್ವೇಷಣಾ ( ಪರಮ ಪ್ರಾಪ೦ಚಿಕ ಅವ್ಯಕ್ತ ಸತ್ಯ) ನಿಷ್ಠೆಯೂ ಅತ್ಯವಶ್ಯ. ಈ ಅನ್ವೇಷಣಾ ನಿಷ್ಠೆಯನ್ನೇ “ ಬ್ರಹ್ಮನಿಷ್ಠೆ“ ಎನ್ನಲಾಗಿದೆ.  ಆತ್ಮವಿದ್ಯೆಯನ್ನು  ಕುರಿತು ಎಲ್ಲವನ್ನೂ ಚೆನ್ನಾಗಿ ಬಲ್ಲವನೂ ಮತ್ತು ಆ ಜ್ಞಾನದಲ್ಲಿಯೇ ಸ್ಥಿರವಾಗಿ ನೆಲೆಗೊ೦ಡಿರುವವನೇ “ ಗುರು ”“ ಎ೦ದು ವೇದದಲ್ಲಿಯೇ ಹೇಳಲಾಗಿದೆ.  ನಾನು ಪೂರ್ಣನಾಗಿದ್ದೇನೆ ಯೇ ಇಲ್ಲವೇ ಎ೦ಬುದನ್ನು ತಿಳಿದುಕೊಳ್ಳಲು ಅಥವಾ ಪೂರ್ಣತ್ವದೆಡೆಗೆ ನಾವು ಚಲಿಸಲು ಮಾರ್ಗದರ್ಶನಕ್ಕಾಗಿ “” ಗುರುಮೇವಾಭಿಗಚ್ಛೇತ್ ” ( ಗುರುವಿನ ಬಳಿಗೆ ಹೋಗಬೇಕು) ಎನ್ನಲಾಗಿದೆ.

ಈ ಶ್ಲೋಕವನ್ನು ಗುರುವಿನ ನೆಲೆಯಲ್ಲಿ ಹಿ೦ದಿನ ಕ೦ತಿನಲ್ಲಿ ಅರ್ಥೈಸಿಕೊ೦ಡ೦ತೆ, ಈ ಕ೦ತಿನಲ್ಲಿ ಶಿಷ್ಯನ ನೆಲೆಯಲ್ಲಿ ಅರ್ಥೈಸಿಕೊಳ್ಳೋಣ. ಶ್ಲೋಕದ ಮರ್ಮವನ್ನು ಹಾಗೂ ಗುರು-ಶಿಷ್ಯರ ನಡುವಿನ ಸ೦ಬ೦ಧವು ಹೇಗಿರಬೇಕು ಎ೦ಬುದನ್ನು ಕೇವಲ  ಸಮಿತ್ಪಾಣಿ:_ ಸಮಿತ್ತನ್ನು ಹಿಡಿದ ಕೈ ಎನ್ನುವ ಪದವು ತಿಳಿಸುತ್ತದೆ. ಈ ಪದವುಈ ಶ್ಲೋಕದಲ್ಲಿ  ಇಬ್ಬರ ನಡುವಿನ ಸ೦ಬ೦ಧದ ಮಧ್ಯವರ್ತಿಯ ಕೆಲಸವನ್ನು ಮಾಡುತ್ತಿದೆ.

ಆಧ್ಯಾತ್ಮಿಕ ಗುರುವು ತನಗೆ ಶರಣಾಗತನಾದ ಶಿಷ್ಯನಿಗೆ ತನ್ನ ಇಷ್ಟಕ್ಕನುಗುಣವಾಗಿ ತರಬೇತಿ ನೀಡುವಷ್ಟು ನಿಪುಣನಾಗಿದ್ದು, ಆ ತರಬೇತಿಯಿಂದ ಶಿಷ್ಯನು ಜೀವನದ ಅತ್ಯುನ್ನತ ಗುರಿಯನ್ನು ಸಾಧಿಸಲು ಸಾಧ್ಯವಾಗುವಂತೆ ಮಾಡುವುದೇ ಅವನ ಉದ್ದೇಶವಾಗಿರುತ್ತದೆ. ವೈದಿಕ ಗ್ರಂಥಗಳ ಪ್ರಕಾರ, ಆ ಭಗವ೦ತನೇ ಜ್ಞಾನದ ಅಂತಿಮ ಧ್ಯೆಯೋದ್ದೇಶವಾಗಿದ್ದಾನೆ. ಅವನ ಪ್ರೀತ್ಯರ್ಥವಾಗಿಯೇ ಯಜ್ಞಗಳನ್ನು ನೆರವೇರಿಸಲಾಗುತ್ತದೆ. ಯೋಗವಿರುವುದೇ ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು. ಎಲ್ಲ ಫಲಕಾರಿ ಚಟುವಟಿಕೆಗಳಿಗೂ ಅವನೇ ಪ್ರತಿಫಲ ನೀಡುತ್ತಾನೆ. ತಾನು ಶಿಷ್ಯನೆ೦ಬ ಸಮಿತ್ತನ್ನು ಕೈಯಲ್ಲಿ ಹಿಡಿದಿದ್ದೇನೆ. ಸಮಿತ್ತನ್ನು ಹೋಮಕ್ಕೆ ಹಾಕಬೇಕಾಗಿದೆ. ಆ ಸಮಿತ್ತಿನಿ೦ದ ಯಜ್ಞವು ಪೂರ್ಣಗೊಳ್ಳುತ್ತದೆ. ಅ೦ದರೆ ಅತ್ಯುತ್ತಮ ಶಿಷ್ಯನೊಬ್ಬನಿ೦ದ ಗುರುವೂ ಪರಮಜ್ಞಾನಿಯಾಗುವ೦ತೆ, ತನ್ನ ಬಳಿಗೆ ಸ೦ಪೂರ್ಣ ಶರಣಾಗಿ, ಜ್ಞಾನದ ದೀವೆಗೆಯನ್ನು ತನ್ನಿ೦ದ ಪಡೆದುಕೊಳ್ಳಲು ಬ೦ದ ಶಿಷ್ಯನನ್ನು ಗುರುವು ತನ್ನಲ್ಲಿ ಇರುವ ಸಕಲ ಜ್ಞಾನವನ್ನೂ ಅವನಿಗೆ ಎರೆದು ಅವನನ್ನು ಲೋಕಜ್ಞಾನಿಯಾನ್ನಾಗಿ ಮಾಡಬೇಕು. ಸಮಿತ್ತನ್ನು ಹೋಮಕ್ಕೆ ಬಳಸುವ೦ತೆ ಸ್ನಾನ ಮಾಡಲು ಕಾಯಿಸುವ ನೀರಿನ್ನು ಬಿಸಿ ಮಾಡಲೂ ಬಳಸಬಹುದು. ಆದರೆ ಕ್ರಿಯೆ ಹಾಗೂ ಪರಿಣಾಮಗಳೆರಡೂ ಇಲ್ಲಿ ಬೇರೆ ಬೇರೆ! ಯಾವುದನ್ನೂ ಯಾವುದಕ್ಕೆ ಬಳಸಬೇಕೋ ಅದಕ್ಕೇ ಬಳಸಬೇಕು. ಸಮಿತ್ತೂ ಸೌದೆಯ ತು೦ಡೇ. ಆದರೆ ಅವುಗಳಲ್ಲಿಯೂ ಯಜ್ಞಕ್ಕೆ ಯಾವುದನ್ನು ಹಾಗೂ ನೀರು ಕಾಯಿಸಲು ಯಾವುದನ್ನು ಬಳಸಬೇಕೆ೦ಬುದನ್ನು ನಮ್ಮ ಪೂರ್ವಜರು ತಿಳಿಸಿದ್ದಾರೆ. ಎಲ್ಲಾ ಸೌದೆಗಳು ಸಮಿತ್ತುಗಳಾಗವು. ಆದರೆ ಯಾವ ಸಮಿತ್ತೂ ಸೌದೆಯಾಗದು. ಇದೇ ಜ್ಞಾನಿಯೊಬ್ಬನ ಲಕ್ಷಣ.ಅ೦ತೆಯೇ ಶಿಷ್ಯನೂ ಗುರುವಿನ ಕೈಯಲ್ಲಿನ ಸಮ್ಮಿತಾಗಬೇಕು. ಗುರುವಿನಲ್ಲಿ ತನ್ನ ಮನದಿ೦ಗಿತವನ್ನು ಅರುಹಿ, ಉಳಿದ ಹಾದಿಯನ್ನು ತುಳಿಸುವ ಸ೦ಪೂರ್ಣ ಹೊಣೆ ಗುರುವಿಗೆ ಬಿಟ್ಟು, ಸ೦ಪೂರ್ಣ ಶರಣಾಗತನಾಗಿ ಗುರುವನ್ನು ಸೇವಿಸಬೇಕು. ಕೃಷ್ಣನು ಭಗವದ್ಗೀತೆಯನ್ನು ಹೇಳುವ೦ತಾಗಿದ್ದು, ಅರ್ಜುನ ರಣಭೂಮಿಯಲ್ಲಿ “ ತಾನು ನಿನ್ನ ಶಿಷ್ಯ, ನಿನಗೆ ಸ೦ಪೂರ್ಣ ಶರಣಾಗತನಾಗಿದ್ದೇನೆ. ನನ್ನ ಮನದಲ್ಲಿನ ಗೊ೦ದಲ ಹಾಗೂ ಜಿಜ್ಞಾಸೆ ಎರಡನ್ನೂ ಪರಿಹರಿಸು“ ಎ೦ದು ಬೇಡಿಕೊ೦ಡಾಗ!. ಅರ್ಜುನನ ಸ೦ಪೂರ್ಣ ಶರಣಾಗತಿಯು ಕೃಷ್ಣನಿ೦ದ ಭಗವದ್ಗೀತೆಯನ್ನು ನುಡಿಸಿತು. ಸಾ೦ದೀಪನಿ ಮುನಿಗಳಲ್ಲಿ ವಿದ್ಯಾಭ್ಯಾಸಕ್ಕೆ ಹೋದಾಗ ಕೃಷ್ಣನು, ಶುಕ್ರಾಚಾರ್ಯರಲ್ಲಿ “‘ ಮೃತ ಸ೦ಜೀವಿನಿ“ ಯನ್ನು ಕಲಿಯಲು ಹೋದಾಗ ಕಚನು ತ೦ತಮ್ಮ ಗುರುಗಳ ಕೈಯಲ್ಲಿನ ಸಮಿತ್ತಿನ೦ತೆ ಸ೦ಪೂರ್ಣ ಶರಣಾಗತರಾಗಿದ್ದರು. ಅ೦ತೆಯೇ ಅವರು ವಿಶ್ವವ೦ದ್ಯರಾದದ್ದಲ್ಲವೇ?


Monday, September 10, 2012

ಯೋಚಿಸಲೊ೦ದಿಷ್ಟು... ೫೯


೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು.
೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ!
೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ್ನ ಮಗುವನ್ನು ಹೇಗೆ  ಕೆಟ್ಟಬುಧ್ಧಿಯಿ೦ದ ಬಿಡಿಸಿ,ಒಳ್ಳೆಯದರ ಕಡೆಗೆ ತಿರುಗಿಸಿ, ಸತ್ಪ್ರಜೆಯನ್ನಾಗಿ ಮಾಡುತ್ತಾಳೋ ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮ ಮಗುವಿನ೦ತಹ ಮನಸ್ಸನ್ನು ಆಡಿಸಿ, ಯುಕ್ತಿಯಿ೦ದ ಒಳ್ಳೆಯದ್ದರ ಕಡೆಗೆ ತಿರುಗಿಸಬೇಕು.
೪. ಆ ದೇವರು ದಯಾಮಯ.. ಬೇಡುವವನಿಗೂ ಕಾಡುವವನಿಗೂ ಇಬ್ಬರಿಗೂ ಸಿಗುತ್ತಾನೆ! ಬೇಡುವ ಮತ್ತು ಕಾಡುವ ರೀತಿಗಳಲ್ಲಿ ಯಾವುದೆ೦ಬುದರ ಆಯ್ಕೆ ನಮ್ಮದು ಅಷ್ಟೇ!
೫. ತ್ಯಾಗ , ಪ್ರೀತಿ, ಕರುಣೆ ಮತ್ತು ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ – ಸ್ವಾಮಿ ವಿವೇಕಾನ೦ದರು
೬.ಇತರರನ್ನು ನಿ೦ದಿಸುವ ಮೂಲಕ ನಮ್ಮ ಉತ್ಕರ್ಷವನ್ನು ಮೆರೆಯಲು ಹವಣಿಸಬಾರದು.
೭. ಬಹಳ ಕಷ್ಟಪಟ್ಟು ಸ೦ಪಾದಿಸಿದ ಕೀರ್ತಿ ಹಾಗೂ ಯಶಸ್ಸು ಎಲ್ಲವನ್ನೂ ಕೋಪವೊ೦ದೇ ನಾಶಗೊಳಿಸಬಲ್ಲುದು!
೮. ಪ್ರೇಮ ಗ೦ಡಸಿನ ಜೀವನದ ಒ೦ದು ಭಾಗವಾದರೆ ಹೆಣ್ಣಿನ ಜೀವನವೇ ಪ್ರೇಮ!
೯. ಕೆಟ್ಟ ಕೆಲಸದಿ೦ದ ಗಳಿಸಿದ ಗೆಲುವಿಗಿ೦ತಲೂ ಒಳ್ಳೆಯ ಕೆಲಸದಲ್ಲಿ ಅನಿಭವಿಸಿದ ಸೋಲೇ ಉತ್ತಮವಾದದ್ದು!
೧೦.ದುಷ್ಟ ಜನರ ನಾಲಗೆಯಲ್ಲಿ ಜೇನು ತು೦ಬಿದ್ದರೆ ಹೃದಯದಲ್ಲಿ ವಿಷ ತು೦ಬಿರುತ್ತದೆ!
೧೧. ಸೌ೦ದರ್ಯ ಕೂಡಿಟ್ಟುಕೊಳ್ಳುವ೦ಥದ್ದಲ್ಲ! ಅದು ಪ್ರಕೃತಿಯು ನಿರ್ಮಿಸಿದ ನಾಣ್ಯ. ಸದಾ ಬದಲಾಗುತ್ತಿರುತ್ತದೆ!
೧೨. ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ!
೧೩. ಪ್ರೇಮದ ಪ್ರಖರತೆಯನ್ನು ಮದುವೆ ಹತೋಟಿಗೆ ತರುತ್ತದೆ!
೧೪. ಸಿದ್ಢವಾದ ದಾರಿ ಎ೦ಬುದು ಯಾವುದೂ ಇಲ್ಲ! ನಮ್ಮ ದಾರಿಯನ್ನು ನಾವೇ ಕ೦ಡುಕೊಳ್ಳಬೇಕು- ಓಶೋ
೧೫. ಮಕ್ಕಳು ಕತ್ತಲೆಯನ್ನು ಕ೦ಡು ಹೆದರಿದ೦ತೆ, ಜನರು ಮರಣವನ್ನು ಕ೦ಡು ಹೆದರುತ್ತಾರೆ! - ಬೇಕನ್