Wednesday, October 1, 2014

ಶ್ರೀಕ್ಷೇತ್ರದ ಶ್ರೀ ಶರನ್ನವರಾತ್ರಾ ಮಹೋತ್ಸವ-೨೦೧೪,- ೬

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೨೯-೦೯-೨೦೧೪ ರ ಸೋಮವಾರ   “ಸುರಭಿ ಗಾನ ಕಲಾ ಮ೦ದಿರ, ಮೈಸೂರು“ ಇವರಿ೦ದ ~ ಲಘ್ಹು ಶಾಸ್ತ್ರೀಯ ಸ೦ಗೀತ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಮಕರಾರೂಢಾ ಸ್ಕ೦ಧಮಾತಾ~”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಲಲಿತಾ ಮೂಲಮ೦ತ್ರ ಹೋಮನ್ನು“ ವನ್ನ ನೆರವೇರಿಸಿದರು.

No comments: