ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ
ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು,
ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ
ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
೨೮-೦೯-೨೦೧೪ ರ ಭಾನುವಾರ ಶ್ರೀಮತಿ ರೇಖಾ ಸುಬ್ರಹ್ಮಣ್ಯ ವಿದ್ವಾನ್ ಶ್ರೀ ಆನ೦ದರಾಮ ಭಟ್, ಶಿವಮೊಗ್ಗದವರಿ೦ದ " ವೀಣಾ ವಾದನ ಹಾಗೂ ವೇಣುವಾದನ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಮೃಗಾರೂಢಾ ಕೂಷ್ಮಾ೦ಡ”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ಸೂಕ್ತ ಹೋಮ“ ವನ್ನ ನೆರವೇರಿಸಿದರು.
No comments:
Post a Comment