ಮೂವತ್ತಾರು ವಸ೦ತಗಳ ಹಿ೦ದೆ
ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ!
ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ!
ಹುಟ್ಟಿದ ಕೂಡಲೇ ಒದ್ದೆ ….
ಅಮ್ಮನ ಮಡಿಲಿಗದು ಮಹಾ ಪ್ರಹಾರ!
ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ…
ಅಮ್ಮಾ ಎನ್ನಲಿಲ್ಲ.. ಅಳಲಿಲ್ಲ..
ಕೇವಲ ನಗುವೊ೦ದೇ ಇತ್ತು.
ಇಟ್ಟಲೆಲ್ಲಾ ಆನೆಯ ಹೆಜ್ಜೆ.
ಎಲ್ಲವೂ ನನ್ನದೇ ಸಾಮ್ರಾಜ್ಯ!
ಕಾಲಡಿಯಲಿ ತುಳಿದೆ ಎಲ್ಲರನೂ…
ಕೈಗೆ ಸಿಕ್ಕವರ ತರಿದೆ..
ಎಲ್ಲೆಲ್ಲೂ ವಿಜಯ ಯಾತ್ರೆಯೇ..
ಇ೦ದಿಗೆ ಮೂವತ್ತಾರರ ಭರ್ತಿ..
ಒಮ್ಮೆ ನೋಡುವೆ ಎಲ್ಲೆಲ್ಲೂ..
ಯಾರಿದ್ದಾರೆ ಇಲ್ಲಿ?
ನಾಲ್ಕು ಗೋಡೆಗಳ ನಡುವೆಯೇ
ಮನಸ್ಸಿಗೂ ಬೇಲಿ….
ಬೆಳಕಿನ ಅರಿವಾಗುತ್ತಿಲ್ಲ… ಕತ್ತಲೆ ಕಾಣುತ್ತಿಲ್ಲ…
ಬಿಸಿಲು,ಮಳೆ,ಚಳಿ ಎಲ್ಲವೂ ಒ೦ದೇ…
ಗೋಡೆ ಕೆಡವುವರು ಯಾರಾದರೂ
ಒಮ್ಮೆ ನನ್ನತ್ತ ಬನ್ನಿ..
ನಾಲ್ಕು ಗೋಡೆಗಳ ಜೊತೆಗೆ
ಮನದ ಬೇಲಿಯನೂ ಕತ್ತರಿಸಿಹಾಕಿ..
ಇ೦ದಿನ ಅಡಿಪಾಯದ ಮೇಲೆ
ನಾಳಿನ ಮಹಲನ್ನು ಕಟ್ಟಿಯೇನು!
ಹೊಸ ನಿರೀಕ್ಷೆಗಳು ಹುಟ್ಟಿಕೊ೦ಡಾವು…
ನನ್ನತನದ ಮಜಲು ತಲುಪಿಯೇನು…!
No comments:
Post a Comment