Tuesday, April 13, 2010

`` ನಮ್ಮದು ರಾಮಜನ್ಮಭೂಮಿಯೂ ಹೌದು, ಪುರಾತನ ನಾಗರೀಕತೆಯೂ ಹೌದು `` !


ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ ``ಶ್ರೀ ರಾಮ`` ಮತ್ತು `` ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಕಟ್ಟುಕಥೆಯಲ್ಲ ``ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ. ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.
ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ. `` ಪ್ಲಾನೆಟರಿಯಮ್`` ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ ಹೆಸರಿಸಿರುವ ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.
ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮಹರ್ಷಿ ವಾಲ್ಮೀಕಿಗಳು ರಾಮಾಯಣದ ಬಾಲಕಾ೦ಡ ಸರ್ಗ ೧೯ ಮತ್ತು ೮ ಮತ್ತು ೯ ನೇ (೧/೧೮/೮,೯) ರಲ್ಲಿ ತಿಳಿಸಿದ೦ತೆ ಶ್ರೀ ರಾಮನ ಜನ ವಾದದ್ದು ಚೈತ್ರ ಶುಧ್ಢ ನವಮಿಯ ದಿನ೦ದು. ಆ ದಿನದ ಗ್ರಹಗತಿ ಹೀಗಿದೆ:

ದಿನ:ಚೈತ್ರ ಶುಧ್ಢ ೯

ಸಮಯ: ದಿನ- ಹಗಲು

ರವಿ: ಮೇಷ ರಾಶಿಯಲ್ಲೂ

ಶನಿ:ತುಲಾ ರಾಶಿಯಲ್ಲೂ

ಗುರು: ಕರ್ಕಾಟಕ ರಾಶಿಯಲ್ಲೂ

ಶುಕ್ರ :ಮೀನ ರಾಶಿಯಲ್ಲೂ

ಮ೦ಗಳ:ಮಕರದಲ್ಲಿಯೂ

ಚ೦ದ್ರ;ಪುನರ್ವಸು ನಕ್ಷತ್ರದಲ್ಲಿಯೂ

ರಾಹು: ಧನುಸ್ಸು

ಕೇತು: ಮಿಥುನ

ಲಗ್ನ: ಕರ್ಕಾಟಕ ಲಗ್ನವಾಗಿದ್ದು, ಲಗ್ನಾಧಿಪತಿಯು ಪೂರ್ವದಲ್ಲಿ ಏಳ್ಗತಿಯನ್ನು ಹೊ೦ದುತ್ತಿದ್ದ ಕಾಲ.

ಈ ಎಲ್ಲಾ ಅ೦ಕಿ ಅ೦ಶಗಳನ್ನೂ ಆ ಸಾಫ್ಟ್ ವೇರ್ ನಲ್ಲಿ ಹಾಕಲಾಯ್ತು. ಅದು ಆ ದಿನವನ್ನು ಕ್ರಿ.ಪೂ. ೫೧೧೪, ಜನವರಿ ೧೦ ಎ೦ದು ತೋರಿಸಿತು. ಶ್ರೀ ರಾಮನ ಜನನ ಜನವರಿ ೧೦. ಕ್ರಿ.ಪೂ. ೫೧೧೪ ರಲ್ಲಿ ಆಯಿತು ಎ೦ದಾಯಿತಲ್ಲವೇ? ಅ೦ದರೆ ಇದು ೭೧೨೧ ವರುಷಗಳ ಹಿ೦ದೆ. ಭಾರತೀಯ ಪ೦ಚಾ೦ಗದ ಪ್ರಕಾರ ಚೈತ್ರ ಶುಧ್ಧ ನವಮಿಯ ದಿನದ ಅಪರಾಹ್ನ ೧೨ ರಿ೦ದ ೧ ಗ೦ಟೆಗೆ ನಮ್ಮ ರಾಷ್ಟ್ರದಾದ್ಯ೦ತ ಶ್ರೀರಾಮ ನವಮಿಯನ್ನು ಆಚರಿಸುತ್ತೇವಲ್ಲವೇ?

ಶ್ರೀ ರಾಮ ಜನಿಸಿದ್ದು ಅಯೋಧ್ಯೆ ಯಲ್ಲಿ ಎ೦ದು ಬಹುತೇಕ ಎಲ್ಲಾ ರಾಮಾಯಣಗಳೂ ವಾಲ್ಮೀಕಿ ರಾಮಾಯಣ, ತುಳಸೀ ರಾಮಾಯಣ, ಕಾಳಿದಾಸನ ರಘುವ೦ಶ, ಮತ್ತು ಅನೇಕ ಬೌಧ್ಧ ಮತ್ತು ಜೈನ ಬರಹಗಳು ತಿಳಿಸುತ್ತವೆ. ಈ ಎಲ್ಲಾ ರಚನೆಗಳೂ ಅಯೋಧ್ಯೆಯ ಇತಿಹಾಸದ ಬಗ್ಗೆ ಅ೦ದರೆ ಅದರ ಭೌಗೋಳಿಕ ಅಸ್ತಿತ್ವ, ಶ್ರೀಮ೦ತ ಶಿಲ್ಪಕಲೆ, ಅಯೋಧ್ಯೆಯ ಸೌ೦ದರ್ಯತೆಯ ಬಗ್ಗೆ ಭಾರೀ ವಿವರವಾಗಿ ವರ್ಣಿಸಿವೆ. ಅಯೋಧ್ಯೆ ಅನೇಕ ಸು೦ದರವಾದ ಅರಮನೆಗಳು ಹಾಗೂ ದೇವಾಲಯಗಳನ್ನು ಹೊ೦ದಿತ್ತೆ೦ದು ತಿಳಿಸುತ್ತವೆ. ಅಯೋಧ್ಯಾ ನಗರಿಯು ಸರಯೂ ನದಿಯ ದಡದಲ್ಲಿದ್ದು, ಒ೦ದು ಪಾರ್ಶ್ವದಲ್ಲಿ ಗ೦ಗ ಮತ್ತು ಪಾ೦ಚಾಲ ದೇಶಗಳನ್ನು ಮತ್ತೊ೦ದು ಪಾರ್ಶ್ವದಲ್ಲಿ ಮಿಥಿಲಾ ನಗರಿಯನ್ನು ಸರಹದ್ದಾಗಿ ಪಡೆದಿತ್ತು. ಸಾಮಾನ್ಯವಾಗಿ ೭೦೦೦ ವರುಷಗಳು ಒ೦ದು ದೀರ್ಘಾವಧಿಯಾಗಿದ್ದು, ಹವಾಮಾನ್ಯ ವೈಪರೀತ್ಯಗಳು (ಭೂಕ೦ಪ,ಬಿರುಗಾಳಿ, ಪ್ರವಾಹ, ಇತ್ಯಾದಿ) ಮತ್ತು ವಿದೇಶೀ ಆಕ್ರಮಣಗಳು ನದೀ ಮಾರ್ಗವನ್ನು ಬದಲಿಸಿದವು, ಪಟ್ಟಣಗಳನ್ನು ಮತ್ತು ಕಟ್ಟಡಗಳನ್ನು ನಾಶಮಾಡಿದವು ಅಲ್ಲದೆ ಭೌಗೋಳಿಕ ಸರಹದ್ದು ಯಾ ವಿಸ್ತೀರ್ಣಗಳನ್ನು ನಾಶಪಡಿಸಿದವು. ಈಗಿನ ಅಯೋಧ್ಯೆಯು ವಿಸ್ತೀರ್ಣದಲ್ಲಿ ಚಿಕ್ಕದಾಯಿತು ಹಾಗೂ ನದಿಗಳು ಉತ್ತರ ಹಾಗೂ ದಕ್ಷಿಣದಲ್ಲಿ ಸುಮಾರು ೪೦ ಕಿ.ಮೀ. ವರೆಗೆ ತಮ್ಮ ಮಾರ್ಗವನ್ನು ಬದಲಿಸಿದವು.



ತನ್ನ ೧೩ ನೇ ವಯಸ್ಸಿನಲ್ಲಿ ( ವಾಲ್ಮೀಕಿ ರಾಮಾಯಣದ೦ತೆ) ತಪೋವನ ( ಸಿಧ್ಧಾಶ್ರಮ) ದಲ್ಲಿ ನೆಲೆಸಿದ್ದ ಮಹಷಿ೯ ವಿಶ್ವಾಮಿತ್ರರೊ೦ದಿಗೆ ಅಯೋಧ್ಯೆಯನ್ನು ತ್ಯಜಿಸಿ, ಜನಕ ನಗರಿಯಾದ ಮಿಥಿಲೆಗೆ ತೆರಳಿದರು. ಜನಕನ ಆಸ್ಥಾನದಲ್ಲಿ ಶಿವ ಧನುಸ್ಸನ್ನು ಮುರಿದ ಶ್ರೀ ರಾಮ ಸೀತೆಯನ್ನು ಕೈಹಿಡಿದ. ಸ೦ಶೋಧನೆಗಳು ವಾಲ್ಮೀಕಿ ಮಹರ್ಷಿ ತಿಳಿಸಿದ ಶ್ರೀರಾಮನು ಸ೦ದರ್ಶಿಸಿದ್ದ ಸ್ಥಳಗಳ ಮೂಲಕ ಆರ೦ಭವಾದವು ಮತ್ತು ವಾಲ್ಮೀಕಿ ತಿಳಿಸಿದ್ದನೆನ್ನಲಾದ ಹಾಗೂ ಶ್ರೀರಾಮನ ಜೀವನದ ಮಹತ್ತರ ಘಟನೆಗಳಿಗೆ ಸ೦ಬ೦ಧಿಸಿದ೦ತೆ ಸುಮಾರು ೨೩ ಸ್ಥಳಗಳನ್ನು ಪತ್ತೆಹಚ್ಚಲಾಯ್ತು. ಆ ಸ್ಥಳಗಳು ಶ್ರು೦ಗಿ ಆಶ್ರಮ, ರಾಮ್ ಘಾಟ್, ತಾಟಕವನ, ಸಿಧ್ಧಾಶ್ರಮ, ಗೌತಮಾಶ್ರಮ, ಜನಕಪುರಿ ( ಪ್ರಸ್ತುತ ನೇಪಾಲದಲ್ಲಿದೆ) ಸೀತಾ ಕು೦ಡ ಇತ್ಯಾದಿಗಳಾಗಿದ್ದು, ಆ ಸ್ಥಳಗಳಲ್ಲಿ ಆ ರಾಮಾಯಣದ ಮಹಾಶಯರಿಗೆ ಸ೦ಬ೦ಧಿಸಿದ ಅನೇಕ ಕಟ್ಟಡ ದಾಖಲೆಗಳನ್ನು ವೀಕ್ಷಿಸ ಬಹುದಾಗಿದೆ.

ವನವಾಸಾರ೦ಭದ ಬಗ್ಗೆ: ವಾಲ್ಮೀಕಿ ಮಹರ್ಷಿಯು ರಾಮಾಯಣದ ಅಯೋಧ್ಯಾ ಕಾ೦ಡ (೨/೪/೧೮) ದಲ್ಲಿ ದಶರಥನು ಶ್ರೀ ರಾಮನಿಗೆ ಪಟ್ಟವನ್ನು ಕಟ್ಟಲು ಏಕೆ ತರಾತುರಿಯನ್ನು ಮಾಡಿದನೆ೦ದರೆ ಆಗ ಅವನ ಗ್ರಹಗತಿ ಹೀಗಿತ್ತು: ದಶರಥನು ರೇವತಿ ನಕ್ಷತ್ರದಲ್ಲಿ ಜನಿತನಾಗಿದ್ದು, ಆಗ ರೇವತಿ ನ಼ಕ್ಷತ್ರವು ರವಿ, ಮ೦ಗಳ ಹಾಗೂ ರಾಹು ಗಳಿ೦ದ ಸುತ್ತುವರಿಯಲ್ಪಟ್ಟಿದ್ದು, ಸಾಮಾನ್ಯವಾಗಿ ಆ ಗ್ರಹಗತಿಯಲ್ಲಿ ರಾಜನು ಮರಣ ಹೊ೦ದಬೇಕು ಇಲ್ಲವೇ ಅನೇಕ ಗೊ೦ದಲಗಳಿಗೆ ಬಲಿಪಶುವಾಗಬೇಕು. ಈ ಗ್ರಹಗತಿಯು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಜನವರಿ ೫ ,೫೦೮೯ ಕ್ರಿ.ಪೂ. ರ೦ದು ಸ೦ಭವಿಸಿದ್ದು, ಅದೇ ದಿನವೇ ಶ್ರೀ ರಾಮ ಅಯೋಧ್ಯೆಯನ್ನು ತ್ಯಜಿಸಿ, ತನ್ನ ವನವಾಸಾರ೦ಭ ಮಾಡಿದ್ದು. ಹೀಗೆ ಶ್ರೀರಾಮನು ವನವಾಸಕ್ಕೆ ತೆರಳಿದ್ದು ತನ್ನ ೨೫ ನೇ ವಯಸ್ಸಿನಲ್ಲಿ. (೫೧೧೪-೫೦೮೯)
ತನ್ನ ವನವಾಸದ ೧೩ ನೇ ವರ್ಷದ ಅ೦ತ್ಯ ಭಾಗದಲ್ಲಿ ಶ್ರೀರಾಮನು ಖರದೂಷಣರೊ೦ದಿಗೆ ಯುಧ್ಧ ಮಾಡಿದ್ದು ಆ ದಿನ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣವಿತ್ತೆ೦ದೂ ವಾಲ್ಮೀಕಿ ರಾಮಾಯಣದಲ್ಲಿ ಬರೆಯುತ್ತಾನೆ. ಈ ಅ೦ಕಿಅ೦ಶಗಳನ್ನು ಹೊಡೆದ ಕೂಡಲೇ ಸಾಫ್ಟ್ ವೇರ್ ದಿನಾ೦ಕ್ ಅಕ್ಟೋಬರ್ ೭, ಕ್ರಿ.ಪೂ. ೫೦೭೭ನೇ ಇಸವಿಯ೦ದು ಸೂರ್ಯಗ್ರಹಣವಿತ್ತೆ೦ದೂ, ಅದನ್ನು ಪ೦ಚವಟಿಯಿ೦ದ ವೀಕ್ಷಿಸಬಹುದಾಗಿತ್ತೆ೦ದೂ ತಿಳಿಸಿತು. ವಾಲ್ಮೀಕಿ ಹೇಳಿದ ಗ್ರಹಗತಿಗಳೂ ನಿಖರವಾಗಿದ್ದವು. ಮ೦ಗಳನು ಮಧ್ಯಭಾಗದಲ್ಲಿದ್ದನೆ೦ದೂ, ಒ೦ದು ಬದಿಯಲ್ಲಿ ವೀನಸ್ ಮತ್ತು ಬುಧರಿದ್ದರು, ಮತ್ತೊ೦ದು ಬದಿಯಲ್ಲಿ ರವಿ ಮತ್ತು ಶನಿ ಯೂ ಇದ್ದರು. ವಾಲ್ಮೀಕಿಯು ಸೂಚಿಸಿದ ಗ್ರಹಗತಿಯೂ ಸಾಫ್ಟ್ ವೇರ್ ತಿಳಿಸಿದ ಗ್ರಹಗತಿಗಳೂ ತಾಳೆಯಾಗಿದ್ದವು. ಮು೦ದಿನ ಅಧ್ಯಾಯಗಳಲ್ಲಿ ತಿಳಿಸಿದ ಗ್ರಹಗತಿಗಳ೦ತೆ, ರಾವಣನು ಡಿಸೆ೦ಬರ್ ೪, ೫೦೭೫ ಕ್ರಿ.ಪೂ ದ೦ದು ವಧಿಸಲ್ಪಟ್ಟನು ಮತ್ತು ಕ್ರಿ.ಪೂ ೫೦೭೫ ಡಿಸೆ೦ಬರ್ ಆರರ೦ದು ಶ್ರೀರಾಮ ತನ್ನ ವನವಾಸವನ್ನು ಅ೦ತ್ಯ ಗೊಳಿಸಿದನು. ಆ ದಿನವೂ ಸಹ ಚೈತ್ರ ಶುಧ್ಧ ನವಮಿಯೇ ಆಗಿತ್ತು. ತನ್ನ ವನವಾಸವನ್ನು ಅ೦ತ್ಯಗೊಳಿಸಿ ಅಯೋಧ್ಯೆಗೆ ಹಿ೦ತಿರುಗಿದಾಗ ಶ್ರೀ ರಾಮನ ವಯಸ್ಸು ೩೯.(೫೧೧೪-೫೦೭೫)



ಭಟ್ನಾಗರ್ ರವರ ಸಹೋದ್ಯೋಗಿಯಾಗಿದ್ದ ಡಾ|| ರಾಮ್ ಅವತಾರ್, ಮಹರ್ಷಿ ವಾಲ್ಮೀಕಿಯು ಬರೆದ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಸ೦ದರ್ಶಿಸಿದ್ದ ಅಯೋಧ್ಯೆಯಿ೦ದ ಆರ೦ಭಿಸಿ ರಾಮೇಶ್ವರದ ವರೆಗಿನ ಸ್ಥಳಗಳ ಸ೦ಶೋಧನೆಯತ್ತ ತಮ್ಮ ಗಮನವನ್ನು ಕೇ೦ದ್ರೀಕರಿಸಿದರು.ಅವರು ಆ ಸಾಲಿನಲ್ಲಿ ಸುಮಾರು ೧೯೫ ಸ್ಥಳಗಳನ್ನು ಕ೦ಡುಹಿಡಿದರು. ಹಾಗೂ ಆ ಸ್ಥಳಗಳಲ್ಲಿ ರಾಮಾಯಣದ ಕಾಲದಲ್ಲಿ ಕಟ್ಟಿದ್ದರೆನ್ನಲಾದ ಶ್ರೀರಾಮ-ಸೀತೆಯರ ಜೀವನಕ್ಕೆ ಸ೦ಬ೦ಧಿಸಿದ ಕಟ್ಟಡಗಳನ್ನು ಗುರುತಿಸಿದರು. ಈ ಸ೦ಶೋಧನೆಯು ತಮಸಾತಲ್( ಮ೦ದಾಹ್),ಶ್ರು೦ಗೇರ್ವರ್ ರ್ಪುರ್( ಸಿ೦ಗರೌರ್),ಋಷಿ ಭಾರಧ್ವಾಜರ ಆಶ್ರಮ( ಅಲಹಾಬಾದ್ ನಗರಿಯ ಹತ್ತಿರ)ಋಷಿ ಅತ್ರಿಗಳ ಆಶ್ರಮ,ಮಾರ್ಕಾ೦ಡೇಯರ ಆಶ್ರಮ( ಮಾರ್ಕು೦ಡಿ),ಚಿತ್ರಕೂಟ,ಪರ್ಣಕುಟಿ( ಗೋದಾವರೀ ನದಿಯ ತೀರದಲ್ಲಿ),ಪ೦ಚವಟಿ, ಸೀತಾ ಸರೋವರ,ರಾಮ್ ಕು೦ಡ್( ನಾಸಿಕದ ಹತ್ತಿರ ತ್ರಯ೦ಬಕೇಶ್ವರದಲ್ಲಿ),ಶಬರೀ ಆಶ್ರಮ,ಕಿಷ್ಕಿ೦ಧೆ( ಈಗಿನ ಅಣ್ಣಗೊರೈ ಗ್ರಾಮ), ಧನುಷ್ಕೋಟಿ ಮತ್ತು ರಾಮೇಶ್ವರ ದೇವಸ್ಥಾನಗಳನ್ನು ಒಳಗೊ೦ಡಿತ್ತು.

ವಾಲ್ಮೀಕಿಯು ಶ್ರೀರಾಮನು ರಾಮೇಶ್ವರ ಮತ್ತು ಶ್ರೀಲ೦ಕೆಗೆ ಸ೦ಪರ್ಕ ಕಲ್ಪಿಸಲೋಸುಗ ವಾನರರ ಒಡಗೂಡಿ ಒ೦ದು ಸೇತುವೆಯನ್ನು ನಿರ್ಮಿಸಿದ ಬಗ್ಗೆ ಹೇಳಿದ್ದಾನಷ್ಟೇ. ಇತ್ತೀಚೆಗೆ ನಾಸಾ ರಾಮೇಶ್ವರ೦ ಮತ್ತು ಶ್ರೀಲ೦ಕಾದ ನಡುವಿನ ಪಾಕ್ ಸ೦ಧಿಯಲ್ಲಿ ಕೂಡಿಕೊ೦ಡಿರುವ ಮನುಷ್ಯ ನಿರ್ಮಿತ ಸೇತುವೆಯ ಚಿತ್ರವನ್ನು ತೆಗೆಯಿತು.ಇತ್ತಿಚೆಗೆ ಶ್ರೀಲ೦ಕಾ ಸರಕಾರವು ಸೀತಾವನವನ್ನು ಪ್ರವಾಸೋದ್ಯಮ ತಾಣವನ್ನಾಗಿ ಉನ್ನತಿಗೊಳಿಸಲು ತೀರ್ಮಾನಿಸಿದೆ. ಲ೦ಕನ್ನರು ರಾವಣನು ಸೀತೆಯನ್ನು ಬ೦ಧಿಸಿಟ್ಟಿದ್ದ ತಾಣವಾದ ಅದನ್ನು ಅಶೋಕವನವೆ೦ದು ಕರೆಯುತ್ತಾರೆ. ( ಇದು ನಡೆದಿದ್ದು ಕ್ರಿ.ಪೂ.೫೦೭೬ನೇ ಇಸವಿಯಲ್ಲಿ)


ಭಾರತೀಯ ಇತಿಹಾಸವು ಶ್ರೀರಾಮನು ಸೂರ್ಯವ೦ಶದವನಾಗಿದ್ದು,ಆ ವ೦ಶದ ೬೪ ನೇ ರಾಜನೆ೦ದೂ ದಾಖಲಿಸಿದೆ. ೮೦ ವರುಷಗಳ ಹಿ೦ದೆ ಶ್ರೀ ರಾಯ್ ಬಹಾದ್ದೂರ್ ಸೀತಾರಾಮ್ ರವರು ಬರೆದ ತಮ್ಮ `` ಅಯೋಧ್ಯಾ ಕಾ ಇತಿಹಾಸ್ `` ಎ೦ಬ ಗ್ರ೦ಥದಲ್ಲಿ ಆ ವ೦ಶದ ೬೩ ರಾಜರ ನಾಮಧೇಯಗಳನ್ನು ಹಾಗೂ ಅವರಿಗೆ ಸ೦ಬ೦ಧಿಸಿದ ವಿವರಗಳನ್ನು ವರ್ಣಿಸಿದ್ದಾರೆ. ಲೂಸಿಯಾನಾ ವಿಶ್ವವಿದ್ಯಾಲಯದ ಪ್ರೊ. ಸುಭಾಷ್ ಕಾಕ್ ಸಹ ತಮ್ಮ ಗ್ರ೦ಥವಾದ `` ದಿ ಅಶ್ಟ್ರೋನೋಮಿಕಲ್ ಕೋಡ್ ಆಫ್ ಋಗ್ವೇದ `` ದಲ್ಲಿಯೂ ಶ್ರೀ ರಾಮನ ೬೩ ಪೂರ್ವಜರ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ದಶರಥ ಮಹಾರಾಜ, ಅಜ, ರಘು, ದಿಲೀಪ ಮು೦ತಾದವರನ್ನು ಶ್ರೀರಾಮನ ಪೂರ್ವಜರೆ೦ದು ತಿಳಿಯಲಾಗಿದೆ. ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೂ ಹಾಗೂ ಬ೦ಗಾಲದಿ೦ದ ಗುಜರಾತ್ ವರೆಗೂ ಅದರಲ್ಲೂ ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮು೦ತಾದ ಪ್ರದೇಶಗಳಲ್ಲಿನ ಬುಡಕಟ್ಟು ಜನರು ಶ್ರೀ ರಾಮನ ಅಸ್ತಿತ್ವವನ್ನು ನಿಖರವಾಗಿ ನ೦ಬುತ್ತಾರೆ. ಅವರುಗಳು ಆಚರಿಸುವ ಬಹುತೇಕ ಹಬ್ಬ/ಹರಿದಿನಗಳು ಶ್ರೀರಾಮ ಮತ್ತು ಶ್ರೀ ಶ್ಯಾಮರ ಜೀವನಕ್ಕೆ ಸ೦ಬ೦ಧಿಸಿದ ಘಟನೆಗಳ ಕುರಿತೇ ಆಗಿರುತ್ತದೆ.


ಶ್ರೀರಾಮನು ಮಹಮದ್ ಪೈಗ೦ಬರ್ ಮತ್ತು ಏಸುಕ್ರಿಸ್ತರು ಜನಿಸುವುದಕ್ಕಿ೦ತ ಮು೦ಚೆಯೇ ಹಾಗೂ ಇಸ್ಲಾ೦ ಮತ್ತು ಕ್ರೈಸ್ತ ಮತಗಳು ಈ ಭೂಮಿಗೆ ಪರಿಚಯವಾಗುವುದಕ್ಕಿ೦ತ ಮೊದಲಿನ ಕಾಲಕ್ಕೆ ಸೇರಿದವನು. ಹಾಗಾಗಿ ಶ್ರೀ ರಾಮನು ಭಾರತದ ಜಾತಿ-ಮತಗಳ-ವರ್ಣಗಳ ಭೇಧವಿಲ್ಲದೆ ಎಲ್ಲರಿಗೂ ಸೇರಿದವನು.

ಶ್ರೀ ರಾಮರಾಜ್ಯದ ಕಾಲದಲ್ಲಿ ಜನನದಿ೦ದಲೇ ಮಾನವನಿಗೆ ಹೊ೦ದಿಕೊ೦ಡು ಬರುವ ಈ ದುಷ್ಟ ಜಾತಿ ಪಧ್ಧತಿಯ ಅಸ್ತಿತ್ವವಿರಲಿಲ್ಲ. ವಾಲ್ಮೀಕಿಯು ಕೆಳಸ್ತರದವನಾಗಿದ್ದರೂ ಸೀತಾಮಾತೆಯು ಅವನ ದತ್ತು ಪುತ್ರಿಯ೦ತೆ ಅವನ ಆಶ್ರಮದಲ್ಲಿ ಶ್ರೀ ರಾಮನಿ೦ದ ಪರಿತ್ಯಾಗಗೊಳ್ಳಲ್ಪಟ್ಟ ನ೦ತರ ಅವನೊ೦ದಿಗಿದ್ದಲೂ ಮತ್ತು ಅಲ್ಲಿಯೇ ಲವ-ಕುಶರನ್ನು ಹಡೆದಳು.ಅವನ ಶಿಷ್ಯರಾಗಿಯೇ ಲವ-ಕುಶರು ಬೆಳೆದರು. ಶಬರಿಯು `` ಭೀಲ್ `` ಎನ್ನುವ ಬುಡಕಟ್ಟಿಗೆ ಸೇರಿದವಳಾಗಿದ್ದಳು. ಶ್ರೀರಾಮನ ಸೈನ್ಯವು ಮಧ್ಯ ಹಾಗೂ ದಕ್ಷಿಣ ಭಾರತದ ಅನೇಕ ಬುಡಕಟ್ಟುಗಳ ವೀರರಿ೦ದ ಕೂಡಿದ್ದ ಸೈನ್ಯವಾಗಿದ್ದರಿ೦ದಲೇ ಶ್ರೀರಾಮನು ಭಾರತೀಯರ ಎಲ್ಲಾ ವರ್ಗದ ಜನರಿಗೂ ಆದರ್ಶಪ್ರಾಯನು.

ನಾವು ವಾಲ್ಮೀಕಿಯು ಈ ಭೂಮಿಯ ಮೊದಲನೇ ಖಗೋಳ ಶಾಸ್ತ್ರಜ್ಞನಾಗಿದ್ದನು ಹಾಗೂ ಅವನ ಖಗೋಳ ವಿದ್ಯೆಯ ಅಡಿಪಾಯದ ಮೇಲೇಯೇ ಈ ದಿನ ಆ ವಿದ್ಯೆ ಇಷ್ಟು ಮು೦ದುವರಿದಿದೆ ಎ೦ಬುದಕ್ಕೆ ಅತ್ಯ೦ತ ಹೆಮ್ಮೆ ಪಡಬೇಕಲ್ಲವೇ? ಇತ್ತೀಚಿನ ನೂತನವಾದ ಖಗೋಳ ಶಾಸ್ತ್ರದ ಸಾಫ್ಟ್ ವೇರ್ ಗಳೂ ಆತನ ಖಗೋಳ ಶಾಸ್ತ್ರದ ಮಾಹಿತಿಗಳನ್ನು ಅತ್ಯ೦ತ ನಿಖರ ಎ೦ದು ಒಪ್ಪಿಕೊ೦ಡಿವೆ.

ಮೊಹಮದ್ ಪೈಗ೦ಬರ್ ೧೪೦೦ ವರುಷಗಳ ಹಿ೦ದೆಯೂ, ಕ್ರಿಸ್ತನು ೨೦೦೦ ವರುಷಗಳ ಹಿ೦ದೆಯೂ, ಗೌತಮ ಬುಧ್ಧನು ೨೬೦೦ ವರುಷಗಳ ಹಿ೦ದೆಯೂ ಜನಿಸಿದವರು. ಶ್ರೀ ರಾಮನು ೭೦೦೦ ವರುಷಗಳ ಹಿ೦ದೆಯೇ ಜನಿಸಿದವನು.ಆದ್ದರಿ೦ದಲೇ ಶ್ರೀರಾಮನಿಗೆ ಸ೦ಬ೦ಧಿಸಿದ ಎಲ್ಲಾ ವಿಚಾರಗಳನ್ನೂ ಸ೦ಶೋಧಿಸುವುದೆ೦ದರೆ ಕಷ್ಟಸಾಧ್ಯವೇ ಸರಿ. ಏಕೆ೦ದರೆ ಸುಮಾರು ದಾಖಲೆಗಳು ಹವಾಮಾನ ವೈಪ್ಯರೀತ್ಯಗಳಿ೦ದಾಗಿ ನಾಶವಾಗಿವೆ.ಆದರೆ ದೊರೆತ ದಾಖಲೆಗಳು ನಮಗೆ ನಮ್ಮ ಸನಾತನ ಸ೦ಸ್ಕ್ರುತಿಯ ಅರಿವಾಗಲು ಸಾಕು.

ಉಪಸ೦ಹಾರ: ರಾಮಾಯಣವನ್ನು ದ೦ತಕಥೆಯೆ೦ದೂ, ಎಲ್ಲಿ೦ದಲೋ ಹಾರಿ ಬ೦ದದ್ದೆ೦ದು, ವಾಲ್ಮೀಕಿಗಿ೦ತ ಮೊದಲೇ ಬ್ರಹ್ಮನ ಮುಖ ಕಮಲದಿ೦ದ ಮತ್ತೊ೦ದು ರಾಮಾಯಣ ಬ೦ದಿತ್ತು, ಅದೇ ಮೂಲ ರಾಮಾಯಣ, ರಾಮಾಯಣ ಒ೦ದು ಜಾನಪದ ಕಥೆ ಮು೦ತಾದ ಊಹಾ-ಪೋಹಗಳನ್ನು ಕೈಬಿಡೋಣ. ವಾಲ್ಮೀಕಿ ಮಹರ್ಷಿಯು ಈ ದೇಶದ ಜನರ ಬಾಳ್ವೆಗಾಗಿ, ಜನರ ಆದರ್ಶವಾಗಿ, ನಮಗೊಬ್ಬ ಮ೦ಗಳ ಪುರುಷನನ್ನು ನೀಡಿದ್ದಾನೆ. ಅವನೇ ಶ್ರೀ ರಾಮ. ರಾಮಾಯಣ ನಿಜವಾಗಿಯೂ ಭರತ ಭೂಮಿಯಲ್ಲಿ ನಡೆದ ಇತಿಹಾಸವೆ೦ದು ಇನ್ನಾದರೂ ಒಪ್ಪೋಣ. ವಾಲ್ಮೀಕಿಯ ರಾಮಾಯಣವೇ ಮೂಲ ರಾಮಾಯಣ ಎ೦ಬ ಮಾತಿಗೆ ನಮ್ಮ ಸಹಮತವನ್ನು ವ್ಯಕ್ತಪಡಿಸೋಣ.

ನಾವು ಭಾರತೀಯರಾಗಿ ಹೆಮ್ಮೆ ಪಡೋಣ! ಏಕೆ೦ದರೆ ನಮ್ಮ ನಾಗರೀಕತೆಯೇ ಅತ್ಯ೦ತ ಪುರಾತನವಾದದ್ದು ಮತ್ತು ಇದು ಸರಿ ಸುಮಾರು ೧೦೦೦೦ ವರುಷಗಳ ಹಿ೦ದಿನದು. ಆದ್ದರಿ೦ದಲೇ ಕ್ರಿ.ಪೂ. ೧೫೦೦ರಲ್ಲಿ ಆರ್ಯರು ಧಾಳಿ ಮಾಡಿದ ವಿಚಾರವನ್ನು ಬಿಟ್ಟುಬಿಡೋಣ. ಅಲ್ಲದೆ ಈ ವಾದದ ಜನಕನಾದ ಮ್ಯಾಕ್ಸ್ ಮುಲ್ಲರ್ ತಾನೇ ಈ ವಾದವನ್ನು ಅಲ್ಲಗಳೆದಿದ್ದಾನೆ.ಆದ್ದರಿ೦ದಲೇ ಎಲ್ಲಾ ಭಾರತೀಯ ಇತಿಹಾಸ ಶಾಸ್ತ್ರಜ್ಞರು, ಬುಧ್ಧಿಜೀವಿಗಳು ಇನ್ನಾದರೂ ಭಾರತೀಯ ಇತಿಹಾಸವನ್ನು ದ೦ತಕಥೆ ಎ೦ದು ತಳ್ಳಿಹಾಕದೆ, ಪುರಾತನ ಬಾರತೀಯ ನಾಗರೀಕತೆ ಹಾಗೂ ಸ೦ಸ್ಕ್ರುತಿಗಳ ಮೇಲೆ ಹೆಚ್ಚೆಚ್ಚು ಬೆಳಕು ಚೆಲ್ಲುವ ಸಾಕ್ಷಿಗಳನ್ನು ಸ೦ಶೋಧಿಸಬೇಕು. ನಮ್ಮದೇ ಪುರಾತನ ನಾಗರೀಕತೆ ಎ೦ದು ಹೆಮ್ಮೆಯಿ೦ದ ನಾವೆಲ್ಲರೂ ಹೇಳಿಕೊಳ್ಳುವ೦ತಾಗಬೇಕು.






ಷರಾ:

ಆಧಾರಗಳು

೧. groups.google.com.fj/group/it.../3e1aa402aa2e38b2?...( ಮಾತ೦ ಕನ್ನಡಿಗರು)

೨. timesofindia.indiatimes.com/cms.dll/html/uncomp/articleshow?...

೩.hari-vrinda-dham.sulekha.com/blog/.../was-sri-ram-really-born





No comments: