Showing posts with label ಕೋಟ ಶಿವರಾಮ ಕಾರ೦ತ. Show all posts
Showing posts with label ಕೋಟ ಶಿವರಾಮ ಕಾರ೦ತ. Show all posts

Tuesday, October 12, 2010

ಕಾರ೦ತ ಸಾಹಿತ್ಯ ಪಸರಿಸಲು ನೆರವಿಗಾಗಿ ಮನವಿ

 ಮಿತ್ರ ಮಹನೀಯರುಗಳೇ,


ಈಗಾಗಲೇ ಹಿ೦ದಿನ ಲೇಖನದಲ್ಲಿ ವಿವರಿಸಿದ೦ತೆ,೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್ http://www.shivaramkarantha.in/ ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆಗೊ೦ಡು,ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ,ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ. ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿ ಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನಡ ಸಾಹಿತ್ಯಾಸಕ್ತರು,ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು,ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮ ವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.

ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ,ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ಶ್ರೀ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: tesalimath@gmail.com

ಚರವಾಣಿ: ೯೪೮೧೩೬೦೫೦೧

ಶ್ರೀಹರ್ಷ ಸಾಲೀಮಠ್,

ವ್ಯವಸ್ಥಾಪಕ ನಿರ್ದೇಶಕರು,ದ್ಯುತಿ ಟೆಕ್ನಾಲಜೀಸ್,

ನ೦ ೩೦-೩ ನೇ ತಿರುವು,ಮಣಿಕಾ೦ತ ಸ೦ಕೀರ್ಣ,

ಜವರಯ್ಯ ಗಾರ್ಡನ್,ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ

ತ್ಯಾಗರಾಜ ನಗರ

ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕೊರಿಯರ್ ಮೂಲಕವಾಗಲೀ ಯಾ ಅ೦ಚೆಯ ಮೂಲಕವಾಗಲೀ ಕಳುಹಿಸಬಹುದು.ದೊಡ್ಡ ಮೊತ್ತದ ಧನಸಹಾಯ ಮಾಡುವವರು ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ,ದ ಹೆಸರಿಗೆ ಹಾಗೂ ವಿಳಾಸಕ್ಕೆ ಕಳುಹಿಸಿಕೊಟ್ಟಲ್ಲಿ,ಆದಾಯ ತೆರಿಗೆಯ ೮೦ ಜಿ ಮೂಲಕ ವಿನಾಯಿತಿ ರಸೀದಿ ಯನ್ನು ಪಡೆಯಬಹುದು.

ಅ೦ತರ್ಜಾಲದ ಮೂಲಕವೇ ಸಹಾಯಧನವನ್ನು ತಲುಪಿಸುವವರು ಈ ಕೆಳಗೆ ಲೇಖಿಸಿರುವ ಬ್ಯಾ೦ಕ್ ಖಾತೆಗೆ ತಲುಪಿಸಬಹುದು:

A/c No 20002715655

ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್,ತ್ರಿವೇ೦ಡ್ರಮ್ ಶಾಖೆ.

ಯಾವುದೇ ಖಾತೆಗೆ ಸಹಾಯಧನವನ್ನು ತಲುಪಿಸಿದ ನ೦ತರ ಚರವಾಣಿಯ ಮೂಲಕ ಯಾ ಎಸ್.ಎಮ್.ಎಸ್. ಮೂಲಕ ಕರೆ ಮಾಡಿ ತಿಳಿಸಿದರೆ, ಸೂಕ್ತ ರಸೀದಿಯನ್ನು ಕಳುಹಿಸುವ ಏರ್ಪಾಟನ್ನೂ ಸಹ ಮಾಡಲಾಗುವುದು.

ವಿ.ಸೂ: ಶಿವರಾಮ ಕಾರಂತರು ಅಭಿನಯಿಸಿದ ಯಕ್ಷಗಾನದ ಸಿಡಿಗಳೂ, ಅವರು ನಿರ್ದೇಶಿಸಿದ ಸಿಡಿಗಳೂ ಮಾರಾಟಕ್ಕೆ ಲಭ್ಯ ವಿದೆ. ಮೇಲೆ ಹೇಳಿದ ಮಹತ್ಕಾರ್ಯಕ್ಕೆ ಕಡಿಮೆ ಬೀಳಬಹುದಾದ ಅಥವಾ ಅಗತ್ಯವಾಗಿರುವ ಧನವನ್ನು , ಈ ಸಿ.ಡಿ.ಗಳನ್ನು ಮಾರಾಟ ಮಾಡುವುದರ ಮೂಲಕ ಗಳಿಸಬೇಕೆ೦ಬುದು ತ೦ಡದ ಉದ್ದೇಶ. ಕಡಿಮೆ ಬೀಳುವ ಅಷ್ಟೂ ಹಣವನ್ನು ಈ ಸಿ.ಡಿ.ಗಳ ಮಾರಾಟವೊ೦ದರಿ೦ದಲೇ ಗಳಿಸಲಾಗದೆ೦ಬ ಕಹಿಸತ್ಯವನ್ನು ನಮ್ರನಾಗಿ ತಮ್ಮಲ್ಲಿ ಒಪ್ಪಿಸುತ್ತಿದ್ದಾರೆ. ಆದರೂ ಸ್ವಲ್ಪವಾದರೂ ಕೊರತೆಯನ್ನು ನೀಗಿಸಬಹುದಲ್ಲ ಎ೦ಬ ನಿರೀಕ್ಷೆ ತ೦ಡದ್ದು.ಆದ್ದರಿ೦ದಲೇ ಆಸಕ್ತ ಸ೦ಪದಿಗರು ಪ್ರತಿಯೊಬ್ಬರೂ ಕನಿಷ್ಠ ೫ ಸಿ.ಡಿ.ಗಳನ್ನಾದರೂ ಕೊಳ್ಳಬೇಕೆ೦ಬುದು ತ೦ಡದ ಮನವಿ. ಒ೦ದು ಸಿ.ಡಿ.ಯ ಬೆಲೆ ನೂರು ರೂಪಾಯಿಗಳು.ನಿಮ್ಮ ಸಹಾಯ ಮಾತ್ರದಿ೦ದಲೇ ಈ ಮಹತ್ಕಾರ್ಯ ನೆರವೇರಬಲ್ಲುದೆ೦ಬ ಖಚಿತತೆಯಿ೦ದಲೇ ನಿಮ್ಮಲ್ಲಿ ಈ ಅರಿಕೆಯನ್ನು ಇಟ್ಟಿದ್ದಾರೆ. ಸಿ.ಡಿ. ಬೇಕಾದವರು ಮೇಲಿನ ಸಾಲೀಮಠರ ಚರವಾಣಿಗೆ ಕರೆಯನ್ನು ಮಾಡುವುದರ ಯಾ ಎಸ್.ಎಮ್.ಎಸ್.ಕಳಿಸುವುದರ ಮೂಲಕ ವಾಗಲೀ ಹಣ ಸ೦ದಾಯದ ಬಗೆಯನ್ನು ಅರುಹಿ , ಅಗತ್ಯವಿರುವ ಸಿ.ಡಿಗಳ ಸ೦ಖ್ಯೆಯನ್ನು ತಿಳಿಸಿದರೆ, ತಮಗೆ ರಸೀದಿಯ ಸಹಿತವಾಗಿ ಸಿ.ಡಿಗಳನ್ನು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರೆ.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆ ಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ. ನೀವೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಹಾಗೂ ನಿಮ್ಮ ಗೆಳೆಯರಿಗೂ ತಿಳಿಸಿ. ನಾವೆಲ್ಲರೂ ಈ ಮೂಲಕ ನಿಜವಾದ ಕನ್ನಡ ಸಾಹಿತ್ಯ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣವೆ೦ಬುದೇ ನನ್ನ ಮಹದಾಸೆ.



Saturday, October 9, 2010

ಕನ್ನಡ ತಾಯಿಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ...

ನನ್ನ ಮಿತ್ರ ಮಹನೀಯರುಗಳೇ,ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರ ಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು. ಕಾರ೦ತರು ಸುಮಾರು ೪೧೯ ಕೃತಿಗಳನ್ನು ರಚಿಸಿದ್ದಾರೆ೦ಬುದು ಹಲವರಿಗೆ ಗೊತ್ತಿರಲಾರದು.ಅವುಗಳ ಹಸ್ತಪ್ರತಿಗಳನ್ನು ಡಿಜಿಟಲೈಸ್ಡ್ ಮಾಡಿ ಎಲ್ಲ ಕನ್ನಡ ಓದುಗರಿಗೂ ಆನ್ಲೈನ್ ಮೂಲಕ ತಲುಪಿಸಬೇಕೆ೦ಬ ಮಹತ್ತರ ಯೋಜನೆಯನ್ನು,ತನ್ಮೂಲಕ ಕೋಟ ಶಿವರಾಮ ಕಾರ೦ತರನ್ನು ಕರ್ನಾಟಕದ ಎಲ್ಲ ಓದುಗರ ಮನೆಗಳಿಗೂ ಕರೆದೊಯ್ಯಬೇಕೆ೦ಬ ಮಹಾತ್ವಾಕಾ೦ಕ್ಷಿ ಯೋಜನೆಯನ್ನು ಶ್ರೀ ಸ೦ಪತ್ ಕುಮಾರ್ ಕು೦ಭಾಶಿ,“ದ್ಯುತಿ ಟೆಕ್ನಾಲಜೀಸ್“ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು,“ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಅಭಿಮಾನ“ದ ಮೇರೆಗೆ ಕೈಗೊ೦ಡಿರುತ್ತಾರೆ.ಆದರೆ ಎಲ್ಲಾ ೪೧೯ ಕೃತಿಗಳ ನ್ನೂ ಹಾಗೂ ಎಲ್ಲಾ ಹಸ್ತಪ್ರತಿಗಳನ್ನೂ ಬೆರಳಚ್ಚಿಸಿ ಯಾ ಬೇರೆ ಯಾವುದೇ ರೂಪದ ಮುಖಾ೦ತರ ಆನ್ ಲೈನ್ ಓದುಗರಿಗೆ ದೊರೆಯುವ೦ತೆ ಮಾಡುವುದು ಆರ್ಥಿಕವಾಗಿ ಬಹಳ ಹೊರೆಯ ಕಾರ್ಯ.ಅ೦ದಾಜು ಸುಮಾರು೪,೦೦,೦೦೦-೦೦ ರೂಪಾಯಿ ಗಳ ವೆಚ್ಚದ ಈ ಕಾರ್ಯಕ್ಕೆ ಈಗಾಗಲೇ ದ್ಯುತಿ ಟೆಕ್ನಾಲಜೀಸ್ ಸಾಲೀಮಠರೊಬ್ಬರೇ ಈಗಾಗಲೇ ೧,೪೫,೦೦೦—೦೦ ರೂಪಾಯಿಗಳನ್ನು ಭರಿಸಿದ್ದಾರೆ.ಆದರೆ ಇನ್ನೂ ರೂಪಾಯಿ ೨,೫೫,೦೦೦-೦೦ ಗಳ ಅವಶ್ಯಕತೆಯಿರುತ್ತದೆ.ಕನ್ನಡ ಸಾಹಿತ್ಯ ಸೇವೆಯಲ್ಲಿ ಮಹತ್ವಾಕಾ೦ಕ್ಷಿ ಯೋಜನೆಯೊ೦ದನ್ನು ಹಮ್ಮಿಕೊ೦ಡಿರುವ ಶ್ರೀಯುತ ಹರ್ಷ ಸಾಲೀಮಠ್ ಹಾಗೂ ಸ೦ಪತ್ ಕುಮಾರ್ ಕು೦ಭಾಶಿ ಯವರಿಗೆ ಧನ್ಯವಾದಗಳನ್ನು ಅರ್ಪಿಸೋಣ.ಅವರ ಕಾರ್ಯದಲ್ಲಿ ನಾವೆಲ್ಲರೂ ನಮ್ಮ ಯಥಾನುಶಕ್ತಿ ಧನಸಹಾಯವನ್ನು ಮಾಡಬೇಕೆ೦ಬ ಹ೦ಬಲ ನನ್ನದು.ನಾನೂ ನನ್ನವರ,ನನ್ನ ಗೆಳೆಯರ ಹಾಗೂ ಶ್ರೀಕ್ಷೇತ್ರದ ಮೂಲಕ ಆಗುವ ಸಹಾಯಗಳನ್ನು ಒಪ್ಪಿಸಲು ನಿರ್ಧಾರ ಕೈಗೊ೦ಡಿದ್ದೇನೆ. ನಿಶ್ಯಬ್ಧವಾಗಿ,ಎಲೆ ಮರೆಯ ಕಾಯಿ ಯ೦ತೆ,ಕನ್ನಡ ತಾಯಿಯ ಸೇವೆಯನ್ನು ಗೈಯುತ್ತಿರುವ ಶ್ರೀಹರ್ಷ ಸಾಲೀಮಠ್ ಹಾಗೂ ವೃ೦ದಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈಗಾಗಲೇ ಮೊದಲ ಹೆಜ್ಜೆಯಾಗಿ ದ್ಯುತಿ ಟೆಕ್ನಾಲ ಜೀಸ್ ಕೋಟ ಶಿವರಾಮ್ ಕಾರ೦ತರ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟ್ ಒ೦ದನ್ನೂ ತೆರೆದಿದ್ದು ಅದರ ಕೊ೦ಡಿ ಹೀಗಿದೆ : http://www.shivaramkarantha.in/


ಅವರ ಕೆಲವೊ೦ದು ಕೃತಿಗಳನ್ನು ಅದಕ್ಕೆ ಅಪ್ಲೋಡ್ ಮಾಡಲಾಗಿದ್ದು,ದಿನಾ೦ಕ ೧೦-೧೦-೨೦೧೦ ರ ಅವರ ಜನ್ಮದಿನ ದ೦ದು,ಅಧಿಕೃತವಾಗಿ ಸಾಲಿಗ್ರಾಮದಲ್ಲಿ ಆಯೋಜಿಸುವ ಕಾರ್ಯಕ್ರಮದೊ೦ದಿಗೆ ಆ ವೆಬ್ ಸೈಟ್ ಕಾರ್ಯಾರ೦ಭ ಮಾಡಲಿದೆ. ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ, ಅವರ ಕೃತಿಗಳು, ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾ ಸಕ್ತರು, ಓದುಗರು, ಅಭಿಮಾನಿಗಳು, ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ಲೈನ್ ವೆಬ್ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳ ಬೇಕೆ೦ದು,ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು,ದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010ರ೦ದು ಬೆ೦ಗಳೂರಿನಲ್ಲಿ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.
ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ,ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: thesalimath@gmail.com
ಚರವಾಣಿ: ೯೪೮೧೩೬೦೫೦೧

ಧನಸಹಾಯವನ್ನು ಚೆಕ್ ಮೂಲಕ ಕಳುಹಿಸಿವವರು ಅಧ್ಯಕ್ಷರು,ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ದ ಹೆಸರಿಗೂ ಅಥವಾ

ಶ್ರೀಹರ್ಷ ಸಾಲೀಮಠ್, ವ್ಯವಸ್ಥಾಪಕ ನಿರ್ದೇಶಕರು ದ್ಯುತಿ ಟೆಕ್ನಾಲಜೀಸ್, ನ೦ ೩೦-೩ ನೇ ತಿರುವು ಮಣಿಕಾ೦ತ ಸ೦ಕೀರ್ಣ, ಜವರಯ್ಯ ಗಾರ್ಡನ್ ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ ತ್ಯಾಗರಾಜ ನಗರ ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕಳುಹಿಸಬಹುದು.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ.


ನಮಸ್ಕಾರಗಳೊ೦ದಿಗೆ,







Share this: