Monday, July 5, 2010

ಸರಸ-ಸಲ್ಲಾಪ-3

ನಲ್ಲೆ, ಮರಗಳ ಕಡಿದರೆ,

ಟನ್ನಿಗೆ ಮುನ್ನೂರು, ಮಾರಲು ಉರುವಲು

ಕುಟು೦ಬ ಸಾಕಲು ಧನ ಸ೦ಗ್ರಹ

ಮಕ್ಕಳ ಮದುವೆಗದು ಸಾಕಲ್ಲವೇ?



ನಲ್ಲ, ಮರಗಳ ಕಡಿದರೆ

ಎ೦ತು ಉಸಿರಾಡುವುದು?

ಉಸಿರಿದ್ದರಲ್ಲವೇ ಮಕ್ಕಳ ಮದುವೆ!

ಬಿಸಿಲು,ಮಳೆ, ಗಾಳಿ, ಭೀಕರತೆ

ಎಲ್ಲ ಇದ್ದರೂ ಚೆನ್ನ!

ಕಡಿದಲ್ಲೇ ಮತ್ತೊ೦ದ ನೆಟ್ಟರೆ

ಮು೦ದಿನ ಕಾಲಕೂ ಧನಸ೦ಗ್ರಹ!

ಸುತ್ತ-ಮುತ್ತ ಇರಲು ಹಸಿರು

ಮನೆಮ೦ದಿಗೆಲ್ಲಾ ಉಸಿರು!

No comments: