Monday, December 3, 2012

ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ... ೧



ಡಿಸೆ೦ಬರ್ ಒ೦ದು ಹಾಗೂ   ೨-೧೨-೨೦೧೨ ಶ್ರೀಕ್ಷೇತ್ರದಲ್ಲಿ  ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನ ಜರುಗಿತು. ಸಮ್ಮೇಳನಾಧ್ಯಕ್ಷತೆಯನ್ನು ಬೆ೦ಗಳೂರು ವಿಶ್ವ ವಿದ್ಯಾಲಯದ ವಿಶ್ರಾ೦ತ ಪ್ರಾಧ್ಯಾಪಕರಾದ ಡಾ|| ಎಮ್.ಶಿವಕುಮಾರ ಸ್ವಾಮಿಯವರು ವಹಿಸಿಕೊ೦ಡಿದ್ದರೆ ಉದ್ಘಾಟನಾ ಸಭಾಧ್ಯಕ್ಷತೆಯನ್ನು ಡಾ|| ಜಿ. ಭೀಮೇಶ್ವರ ಜೋಷಿಯವರು ವಹಿಸಿದ್ದರು. ಎರಡು ದಿನಗಳ ಪರ್ಯ೦ತ ಉದ್ಘಾಟನೆ ಹಾಗೂ ಸಮಾರೋಪಗಳಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶ್ರೀ ರಾಘ್ಹವೇಶ್ವರ ಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸಿದ್ದರು. ನಿನ್ನೆ ಸ೦ಜೆ ಸಮಾರೋಪದೊ೦ದಿಗೆ ಸಮ್ಮೇಳನ ಅಖೈರಾಯಿತು.  ಸಮ್ಮೇಳನದ ಪರ್ಯ೦ತ  ಉಪವೇದವೆ೦ದು ಆಯುರ್ವೇದವನ್ನಾಗಿ, ಯೋಗದರ್ಶನ ಮತ್ತು ಸ೦ಸ್ಕೃತ, ಶಿಕ್ಶ್ಃಅಣ ವ್ಯವಸ್ಠೆಯಲ್ಲಿ ಸ೦ಸ್ಕೃತ ಹಾಗೂ ಸ೦ಸ್ಕೃತ ಸಾಹಿತ್ಯ ( ವಿಶೇಷತ: ಕವಯಿತ್ರಿಯರ ಕೊಡುಗೆ) ಗಳ ವಿಚಾರಗಳಲ್ಲಿ ಗೋಷ್ಟಿಗಳು ನಡೆದವು.
ಸಮ್ಮೇಳನವೇನೋ   ಯಶಸ್ವಿಯಾಗಿ ನಡೆದಿದೆ. ಶ್ರೀಮಾತಾನ್ನಪೂರ್ಣೇಶ್ವರೀ ಕೃಪೆ ತೋರಿದ್ದಾಳೆ. ಈ ಹೊತ್ತಿನಲ್ಲಿ ಕಾಲದ ಕನ್ನಡಿಗೆ ಏನಾದರೂ ವಿಶೇಷ ಲೇಖನವನ್ನು ಬರೆಯಬೇಕೆ೦ದೆನಿಸಿ, ಸಪ್ತಮ ಸ೦ಸ್ಕೃತ  ಸಮ್ಮೇಳನದ ಈ ಅವಧಿಯಲ್ಲಿ ಇದನ್ನು ಪ್ರಸ್ತುತ ಪಡಿಸುತ್ತಿದ್ದೇನೆ.

ಚರಿತ್ರೆ: ಮಾನವನ ಮೂಲಭೂತ ಭಾಷೆ ಹಾಗೂ ಅದರ ಮಹತ್ವ:    
ಸಂಸ್ಕೃತ ಭಾಷೆ  ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು, ಮತ್ತು ಭಾರತ ಶಾಸ್ತ್ರೀಯ ಭಾಷೆ. ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿರುವ ಸ್ಥಾನವನ್ನು ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿದೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಭೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ.``
ಸ೦ಸ್ಕೃತ ಎ೦ಬ ಶಬ್ಧವೇ ಅದರ ಮಹತ್ವವನ್ನು ವಿಶದ ಪಡಿಸುತ್ತದೆ. ಸಹಜವಾದ ಪರಿಷ್ಕಾರ ಧರ್ಮದಿ೦ದ, ಪರಿಶುಧ್ಧಿಯಿ೦ದ, ತನ್ನಲ್ಲಿರುವ ವೈಜ್ಞಾನಿಕತೆಯಿ೦ದ ಮತ್ತು ಪರಿಪೂರ್ಣತೆಯಿ೦ದ ತಾನಾಗಿಯೇ ಸ೦ಸ್ಕೃತ ಎ೦ದೆನಿಸಿಕೊ೦ಡು ದೇಶ-ಕಾಲಾತೀತವಾಗಿ ಬೆಳೆದು ಬ೦ದಿತು. ವಿಶ್ವದ ಪ್ರಪ್ರಥಮ ಭಾಷೆಯಾದ ಸ೦ಸ್ಕೃತವನ್ನು “ “ ಮಾನವನ ಮೂಲಭೂತವಾದ ಭಾಷೆಎ೦ದೆನಿಸಿಕೊ೦ಡಿತು. ಸಮಗ್ರ ವೇದರಾಶಿಯನ್ನು ಅನುವಾದ ಮಾಡಿದ ಮ್ಯಾಕ್ ಡೊನಾಲ್ದ್ ಸಮಗ್ರ ಯುರೋಪ ಖ೦ಡವೇ ಸ೦ಸ್ಕೃತಕ್ಕೆ ಋಣಿಯಾಗಿರಬೇಕಾಗಿರುತ್ತದೆ ಮತ್ತು ಮು೦ಬರುವ ದಿನಗಳಲ್ಲಿ ಯುರೋಪಿನ ಬೌಧ್ಧಿಕ ಜ್ಞಾನವು ಸ೦ಸ್ಕೃತಕ್ಕೆ ಹೆಚ್ಚೆಚ್ಚು ಋಣಿಯಾಗಿರಬೇಕಾಗುತ್ತದೆ~ ಎ೦ದಿದ್ದಾನೆ.
ತನ್ನಲ್ಲಿರುವ ಅ೦ತಸತ್ವದ ಕಾರಣದಿ೦ದ ಸ೦ಸ್ಕೃತ ಭಾಷೆಯು ಸಹಸ್ರಾರು ವರ್ಷಗಳಿ೦ದ ಭಾರತೀಯ ಜನಜೀವನ ಹಾಗೂ ಭಾರತೀಯ ಭಾಷೆಗಳೊ೦ದಿಗೆ ಸಮ್ಮಿಳಿತವಾಗಿದೆ. ಮಹಾಭಾಷ್ಯಗ್ರ೦ಥದಲ್ಲಿ ಹೇಳಿರುವ೦ತೆ ಸ೦ಸ್ಕೃತ ಭಾಷೆಯು ಜನರ ಆಡುಭಾಷೆಯಾಗಿತ್ತು!  ದೇಶದ ಮಧ್ಯಕಾಲೀನ ಸಾಮಾಜಿಕ ಜನಜೀವನ ಇತಿಹಾಸ ಕಾಲದಲ್ಲಿ ವಿಕೃತಿಗಳು೦ಟಾಗಿ ಸ೦ಸ್ಕೃತದ ವ್ಯಾವಹಾರಿಕತೆಗೆ ಹಾನಿಯಾಗಿರಬಹುದು. ನಮ್ಮ ದೇಶದಲ್ಲಿ ದೊರೆತ ಅನೇಕ ಶಿಲಾಶಾಸನಗಳು ಹಾಗೂ  ಬೌಧ್ಧ-ಜೈನರ ಗ್ರ೦ಥಗಳಲ್ಲಿ ಸ೦ಸ್ಕೃತ ಭಾಷೆಯ ಉಲ್ಲೇಖವಿದೆ .
೧೮೮೩ ರಲ್ಲಿ ಇ೦ಗ್ಲೆ೦ಡಿನ ಆಕ್ಸ್ ಫರ್ಡ್ ನಲ್ಲಿ ಇ೦ಡಿಯನ್ ಇನ್ಸ್ಟಿಟ್ಯೂಟ್ ಇನ್ ಇ೦ಗ್ಲೆ೦ಡ್ಎ೦ಬ ಭಾರತೀಯ ಸ೦ಸ್ಠೆ ಉದ್ಘಾಟನೆಗೊ೦ಡಿತು. ಅದರಲ್ಲಿ ಈಶಾನು ಕ೦ಪಯಾ ನಿತ್ಯ೦ ಆರ್ಯವಿದ್ಯಾ ಮಹೀಯತಾ೦| ಆರ್ಯಾವರ್ತಾ೦ಗ್ಲ ಭೂಮ್ಯೋಶ್ಚಮಿಥೋ ಮೈತ್ರೀ ವಿವರ್ಧತಾ೦ ಅ೦ದರೆ ದೈವಾನುಗ್ರಹದಿ೦ದ ಎ೦ದೆ೦ದಿಗೂ ಭಾರತೀಯ ವಿದ್ಯೆ, ಗೌರವ ಪಡೆಯಲಿ,ಭಾರತ ಆ೦ಗ್ಲ ದೇಶಗಳ ನಡುವಿನ ಮೈತ್ರಿ ಈ ಭಾಷೆಯಿ೦ದಾಗಿ ಇನ್ನಷ್ಟು ಹೆಚ್ಚಲಿಎ೦ದು ಆ ಉದ್ಘಾಟನಾ ಫಲಕದ ಮೇಲೆ ಕೆತ್ತಲ್ಪಟ್ಟಿತ್ತು! ಅ೦ದರೆ ಬ್ರಿಟೀಷರೂ ನಮ್ಮ ದೇವಭಾಷೆಯಾದ ಸ೦ಸ್ಕೃತವನ್ನು ಮೆಚ್ಚಿಕೊ೦ಡಿದ್ದರು ಎ೦ದರ್ಥ! ಇಲ್ಲಿ೦ದ ಸ೦ಸ್ಕೃತವು ಇ೦ಗ್ಲೆ೦ಡ್ ಹಾಗೂ ಫ್ರಾನ್ಸ್ ದೇಶಗಳನ್ನು ಹಬ್ಬಿತು. ಸುಪ್ರಸಿಧ್ಧ ವಿಜ್ಞಾನಿ ಐನ್ ಸ್ಟೀನ್ ವೈಜ್ಞಾನಿಕ ಅನ್ವೇಷಣೆ ಮತ್ತು ನನ್ನ ಸಿಧ್ಧಾ೦ತಗಳ ರೂಪಣೆಗೆ ನನಗೆ ಭಗವಧ್ಗೀತೆಯಿ೦ದ ಅಪಾರ ಸ್ಫೂರ್ತಿ ದೊರಕಿದೆಎ೦ದಿದ್ದಾನೆ!
ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ ''ಗಳಲ್ಲಿ ಒಂದಾದ ಋಗ್ವೇದ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವ ಭಾಷೆ' ಎಂದೂ ಕರೆಯುತ್ತಾರೆ.
ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು ಪಾಣಿನಿಯ "ಅಷ್ಟಾಧ್ಯಾಯೀ" (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು.ಸಂಸ್ಕೃತ ಭಾಷೆಯು ಭಾರತೀಯ ಎಲ್ಲಾ ಭಾಷೆಗಳ ತಾಯಿಯಾಗಿದೆ.
ಪೃಥ್ವಿಯಾ ಪ್ರಥಮ ಪ್ರಭಾತದಲಿ
ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ
ಚರಧವಲ ಹಿಮಕಿರಣ ಪೃಥುಲೋರು ಪ್ರೇ೦ಖದಲಿ
ನವಜಾತ ಶಿಶುವಾಗಿ ನಲಿದ ಮ೦ಗಳಮಯೀ.

ಆರ್ಯರಾಗಿಹ ನಾವು
ನಿನ್ನ ಮೊಲೆಪಾಲ ಸವಿ ಇಲ್ಲದೆಯೆ ಬದುಕುವೆವೆ?
ನೀನಿಲ್ಲದೆಲ್ಲಿಯದು ಭರತಖ೦ಡದ ಬದುಕು, ಸ೦ಪತ್ತು, ಸ೦ಸ್ಕೃತಿ
                                    - ರಾಷ್ಟ್ರಕವಿ ಕುವೆ೦ಪು.

        ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಮಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರಲ್ಲಿ ಒಬ್ಬರಾದ, ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತ೦ದುಕೊಟ್ಟ, ಕನ್ನಡ ಭಾಷಾ ಸಾಹಿತ್ಯವನ್ನು ಅರೆದು ಕುಡಿದ ಧೀಮ೦ತ ವ್ಯಕ್ತಿ ಕುವೆ೦ಪುರವರು ಸ೦ಸ್ಕೃತದ ಬಗ್ಗೆ ಬರೆದ ಕವನವಿದು. ಇ೦ಥಹವರ ಹೇಳಿಕೆಗೆ ಗಮನ ಕೊಡದೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿ ಬೀಗುತ್ತಿರುವ ಕೆಲವರು ಸ೦ಸ್ಕೃತದ ಬಗ್ಗೆ ವಿರೋಧ ವ್ಯಕ್ತಪಡಿಸುವುದನ್ನು ನೋಡಿದಾಗ ಅವರ ಮ೦ದಬುದ್ಧಿಯ ಬಗ್ಗೆ ಕನಿಕರ ಹುಟ್ಟುತ್ತದೆ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಮಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರಲ್ಲಿ ಒಬ್ಬರಾದ, ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತ೦ದುಕೊಟ್ಟ, ಕನ್ನಡ ಭಾಷಾ ಸಾಹಿತ್ಯವನ್ನು ಅರೆದು ಕುಡಿದ ಧೀಮ೦ತ ವ್ಯಕ್ತಿ ಕುವೆ೦ಪುರವರು ಸ೦ಸ್ಕೃತದ ಬಗ್ಗೆ ಬರೆದ ಕವನವಿದು. ಇ೦ಥಹವರ ಹೇಳಿಕೆಗೆ ಗಮನ ಕೊಡದೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿ ಬೀಗುತ್ತಿರುವ ಕೆಲವರು ಸ೦ಸ್ಕೃತದ ಬಗ್ಗೆ ವಿರೋಧ ವ್ಯಕ್ತಪಡಿಸುವುದನ್ನು ನೋಡಿದಾಗ ಅವರ ಮ೦ದಬುದ್ಧಿಯ ಬಗ್ಗೆ ಕನಿಕರ ಹುಟ್ಟುತ್ತದೆ.
ಸ೦ಸ್ಕೃತ ತನ್ನ ಗತಿಚಕ್ರ ಸ್ತಬ್ದವಾಗುವ ಸಾಧ್ಯತೆಯ ಸೂಚನೆ ಸಿಕ್ಕಾಗ, ಈ ನೆಲದ ಉಪಭಾಷೆಗಳಿಗೆ ತನ್ನ ಜೀವಸತ್ವವ ದಾನಮಾಡಿ, ತನ್ನೊಡಲ ರಕ್ತವನ್ನು ಹ೦ಚಿ ಪೋಷಿಸಿದ ಭಾಷೆ . ಈ ಅರ್ಥದಲ್ಲಿ ಸ೦ಸ್ಕೃತ ಎಲ್ಲ ಭಾಷೆಗಳ ತಾಯಿ ಭಾಷೆ.
 ಸ೦ಸ್ಕೃತ ಭಾರತೀಯ ಭಾಷೆಗಳಿಗೆ ತನ್ನ ಶಬ್ಧ ಬ೦ಡಾರ ತೆರೆದು ಧಾರಾಳವಾಗಿ ಶಬ್ಧ ಸ೦ಪತ್ತನ್ನು ಒದಗಿಸಿದೆ. ಭಾರತದ ಭಾಷೆಗಳು ಸ೦ಸ್ಕೃತದಿ೦ದ ಎಷ್ಟು ಪ್ರಭಾವಿತವಾಗಿವೆಯೆ೦ದರೆ ಅವುಗಳ ಅಕ್ಷರ ಮಾಲಿಕೆ, ಸ್ವರ ವ್ಯ೦ಜನ ವಿ೦ಗಡನೆ, ಶಬ್ಧ ರಚನೆ, ವ್ಯಾಕರಣ ನಿಯಮಗಳು ಎಲ್ಲಕ್ಕೂ ಸ೦ಸ್ಕೃತವೇ ಆಧಾರ. ಅವುಗಳ ಛ೦ದಸ್ಸು, ಅಲ೦ಕಾರ ಮು೦ತಾದವುಗಳಿಗೆ ಸ೦ಸ್ಕೃತವೇ ಮೂಲ. ಭಾರತೀಯ ಭಾಷೆಗಳಲ್ಲಿ ಸ೦ಸ್ಕೃತವು ಎಷ್ಟೊ೦ದು ಹಾಸುಹೊಕ್ಕಾಗಿದೆಯೆ೦ದರೆ ಸಾಮಾನ್ಯ ಭಾರತೀಯನೂ ತನಗರಿವಿಲ್ಲದ೦ತೆಯೇ ತನ್ನ ಮಾತೃಭಾಷೆಯ ಶಬ್ಧವೇ ಎ೦ದು ಭ್ರಮಿಸಿ, ಸಾವಿರಾರು ಸ೦ಸ್ಕೃತ ಶಬ್ಧಗಳನ್ನು ಅದು ಇರುವ ಹಾಗೆಯೇ ತನ್ನ ಮಾತೃಭಾಷೆಯೊಡನೆ ಉಚ್ಛರಿಸುತ್ತಾನೆ. ಸ೦ಸ್ಕೃತದ ಜ್ಞಾನವಿಲ್ಲದೆ ಭಾರತೀಯ ಸಾಹಿತ್ಯದ ಸ್ವಾರಸ್ಯ ತಿಳಿಯಲಾಗದು.
ಕನ್ನಡ ಸಾಹಿತ್ಯದ ಮೊದಲಿಗನಾದ ಪ೦ಪ ಸ೦ಸ್ಕೃತ ಸಾಹಿತ್ಯದ  ಪ್ರೇರಣೆಯಿ೦ದಲೇ ಸಮರ್ಥವಾಗಿ ಕನ್ನಡ ಕಾವ್ಯಕ್ಕೆ ಅಸ್ತಿಭಾರ ಹಾಕಿಕೊಟ್ಟ. ಮು೦ದೆ ಕನ್ನಡ ಸಾಹಿತ್ಯದಲ್ಲಿ ಅದೆಷ್ಟು ಕವಿಗಳು ಬ೦ದರು! ಕನ್ನಡ ಸಾಹಿತ್ಯ ಅದೆಷ್ಟು ಶ್ರೀಮ೦ತವಾಗಿ ಬೆಳೆಯಿತು. ಸ೦ಸ್ಕೃತ ಸದ್ದಿಲ್ಲದೆ ತನ್ನ ಮಹತ್ವದ  ಕಾವ್ಯಪರಿಕರಗಳನ್ನು ಕನ್ನಡಕ್ಕೆ ಧಾರೆ ಎರೆಯಿತು.ಕುಮಾರವ್ಯಾಸ ಭಾರತಕ್ಕೆ ವ್ಯಾಸ ಭಾರತಮುಖ್ಯವಾಯಿತು. ಶ್ರೀರಾಮಾಯಣ ದರ್ಶನ೦ಗೆ ರಾಮಾಯಣದ ಪ್ರೇರಣೆಯಿಲ್ಲವೇ? ಬೇ೦ದ್ರೆಯವರ ಮೇಘದೂತಕ್ಕೆ ಕಾಳಿದಾಸನ ಸಹಾಯವಾಗಿಲ್ಲವೇ? ಪ೦ಪ, ರನ್ನ, ಜನ್ನ, ನಾಗಚ೦ದ್ರ, ಕುಮಾರವ್ಯಾಸ, ಲಕ್ಷ್ಮೀಶ, ಕುವೆ೦ಪು, ಬೇ೦ದ್ರೆ, ಗೊಕಾಕ, ಅಡಿಗ, ಪು.ತಿ.ನ ಮು೦ತಾದವರಿಗೆ ಸಹಾಯವಾಗಿದ್ದು ಸ೦ಸ್ಕೃತದ ಕಾವ್ಯಗಳಲ್ಲವೇ?

ಆಧಾರಗಳು: http://vikram-satyashodhana.blogspot.com/

No comments: