೧
ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ
ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು
ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ
ಮತ್ತೊಮ್ಮೆ ಕುರುಡಾದ!!
೨
ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ
ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!
೩
ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ
ಮಹಾಭಕ್ತನೊಬ್ಬನು ದೇವರಿಗೆ ತಿಳಿ ಹೇಳಿದ್ದು ಹೀಗೆ:
ನೀನನಗಾದರೆ ನಾನಿನಗೆ!!
೪.
ಗುಣಪಡಿಸಲಾಗದ ಕಾಯಿಲೆಯಿ೦ದ ನರಳುವ ರೋಗಿಯೂ
ದೂರದಲ್ಲಿದ್ದ ತನ್ನ ಹೆ೦ಡತಿಗೆ ಪತ್ರ ಬರೆಯಲಾರ೦ಬಿಸಿದ್ದು ಹೀಗೆ
” ನಾನು ಕ್ಷೇಮ! ನಿನ್ನ ಆರೋಗ್ಯ ನೋಡಿಕೋ!!“
೫
ಏನೂ ಬೇಡವೆ೦ದು ಬದುಕಿದವನೂ
ಕೊನೆಗೆ ಬ೦ದು ಬಿದ್ದಿದ್ದು ಮಹಾನಗರವೆ೦ಬ ಬಟಾಬಯಲ್ಲಿನಲ್ಲಾದರೆ,
ಅಹ೦ಕಾರದಿ೦ದ ಮೆರೆಯುತ್ತಿದ್ದ ಯೋಗಿಯೊಬ್ಬ ಮಿತಿಮೀರಿದ
ಸ೦ತಸವನ್ನು ಕ೦ಡಿದ್ದು ಜೋಗಿಯ ಬದುಕಿನಲ್ಲಿ !!
1 comment:
Nice poem there.
I had not sent any mails sir.
Any way we will be in Hornadu tomorrow, if you are free, we will meet you.
Thanks,
Swarna
Post a Comment