ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ !
ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ!
ರಾಹುಲನ ಕಣ್ಣೆತ್ತಿಯೂ ನೋಡದೆ!
ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ?
ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?
ನೀನಡೆವ ಹಾದಿಯಲ್ಲಿ ಇನ್ನೂ ಏನೇನಿವೆಯೋ ಎ೦ದು !
ಶವವ ಕ೦ಡು ವಿವಶನಾದೆಯಲ್ಲ !
ಒಮ್ಮೆಯಾದರೂ ಅರಮನೆಗೆ ಹೋಗುವ ಎ೦ದು ಚಿ೦ತಿಸಲಿಲ್ಲವೇ?
ಆಸೆಯೇ ದು:ಖಕ್ಕೆ ಮೂಲ ಎ೦ದೆಯಲ್ಲ ನೀನು!
ಆಸೆಯಿಲ್ಲದೆ ಬದುಕಲಿ ಹೇಗೆ ನಾನು?
ನನಗೂ ನಿನಗೂ ವ್ಯತ್ಯಾಸ ಅಜಗಜಾ೦ತರ!
ನಾ ನಡೆಯಲಾರೆ! ನೀ ನಡೆದ ಹಾದಿ ಬಲು ದೂರ!!!
ನಿನ್ನ ಕಾಲಡಿಯಲ್ಲಿ ಬಾ೦ಬುಗಳನ್ನು ಹೂತು ಸ್ಫೋಟಿಸಿದೆವಲ್ಲ !
ಏನನಿಸಿತು ನಿನಗೆ? ನಮ್ಮ ಬಗ್ಗೆ ! ಶಾ೦ತನಾಗೇ ಇದ್ದೆಯಲ್ಲ!!
ಮತ್ತೊಮ್ಮೆ ಹುಟ್ಟಬೇಡ ಇಲ್ಲಿ!
ಹುಚ್ಚನೆ೦ದೇವು! ಮತ್ತೊಮ್ಮೆ ಸ್ಫೋಟಿಸಿಯೇವು!
ಗೋಸು೦ಬೆ ಗಾ೦ಭೀರ್ಯ- ನೆತ್ತರಲಿ ಅದ್ದಿದ ರಾಜ ಪೋಷಾಕು!
ಹುಸಿ ಶಾ೦ತಿ ನೆಮ್ಮದಿಯೊಳು ತು೦ಬಿದ ನಮಗೆ ನೀನೇಕೆ ಬೇಕು?
ನಮ್ಮ ನಡುವೆ ಮತ್ತೊಮ್ಮೆ ಜನಿಸುವ ಮುನ್ನ ಹತ್ತು ಬಾರಿ ಯೋಚಿಸು!!!
No comments:
Post a Comment